Asianet Suvarna News Asianet Suvarna News

ವ್ಯಾಪಾರಿಗಳ ದರ ಏರಿ​ಕೆ ನಾಟಕ ನಿಲ್ಲಿಸಿದ ಡಿಸಿ..!

ಗರದಲ್ಲಿ ಡಿ.ಸಿ. ಜಗದೀಶ್‌ ಮತ್ತು ಎಸ್ಪಿ ವಿಷ್ಣುವರ್ಧನ್‌ ಮಧ್ಯಾಹ್ನದ ಹೊತ್ತಿಗೆ ಹಠಾತ್‌ ರೌಂಡ್ಸ್‌ ನಡೆಸಿದರು. ಈ ಸಂದರ್ಭದಲ್ಲಿ ಬಿಗ್‌ ಬಜಾರ್‌ನಲ್ಲಿ ತರಕಾರಿ ಬೆಲೆ ಏರಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಡಿಸಿ -ಎಸ್ಪಿ ಅಲ್ಲಿಗೆ ರೈಡ್‌ ಮಾಡಿದ್ದಾರೆ.

 

DC Warns shopkeepers for increasing vegetables price
Author
Bangalore, First Published Mar 25, 2020, 10:01 AM IST

ಉಡುಪಿ(ಮಾ.25): ನಗರದಲ್ಲಿ ಡಿ.ಸಿ. ಜಗದೀಶ್‌ ಮತ್ತು ಎಸ್ಪಿ ವಿಷ್ಣುವರ್ಧನ್‌ ಮಧ್ಯಾಹ್ನದ ಹೊತ್ತಿಗೆ ಹಠಾತ್‌ ರೌಂಡ್ಸ್‌ ನಡೆಸಿದರು. ಈ ಸಂದರ್ಭದಲ್ಲಿ ಬಿಗ್‌ ಬಜಾರ್‌ನಲ್ಲಿ ತರಕಾರಿ ಬೆಲೆ ಏರಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಡಿಸಿ -ಎಸ್ಪಿ ಅಲ್ಲಿಗೆ ರೈಡ್‌ ಮಾಡಿದರು. ಆಹಾರ ಪದಾರ್ಥ, ತರಕಾರಿಗಳನ್ನು ಅಗತ್ಯದ ವಸ್ತುಗಳಾದ್ದರಿಂದ ಅವುಗಳನ್ನು ಮಾರಾಟ ಮಾಡುವುದಕ್ಕೆ ಬಿಗ್‌ ಬಜಾರ್‌ಗೆ ಜಿಲ್ಲಾ​ಧಿ​ಕಾರಿ ಪರ​ವಾ​ನಗಿ ನೀಡಿದ್ದರು.

ಆದರೆ ಜಿಲ್ಲಾ​ಧಿ​ಕಾರಿ ಅಲ್ಲಿಗೆ ಹೋದಾಗ ಕೊರೋನಾ ವೈರಸ್‌ ಹರಡುವುದಕ್ಕೆ ಎಲ್ಲಾ ರೀತಿಯ ಅವಕಾಶಗಳಿರುವುದನ್ನು ಕಂಡರು. ಎ.ಸಿ. ಚಾಲೂ ಇತ್ತು, ಒಳಗೆ ಬರುವ ಗ್ರಾಹಕರ ಕೈಗೆ ಸ್ಯಾನಿಟೈಜರ್‌ ಹಾಕುತ್ತಿರಲಿಲ್ಲ, ಜನರನ್ನು ಗುಂಪಾಗಿ ಒಳಗೆ ಬಿಡಲಾಗಿತ್ತು. ಇದನ್ನು ಕಂಡು ರೇಗಿದ ಜಿಲ್ಲಾ​ಧಿ​ಕಾರಿ ಅಲ್ಲಿನ ವ್ಯವ​ಸ್ಥಾ​ಪ​ಕ​ರನ್ನು ತರಾ​ಟೆಗೆ ತೆಗೆ​ದು​ಕೊಂಡರು.

Fact Check: ಕೊರೋನಾ ವೈರಸ್‌ ಜೀವಿ​ತಾ​ವಧಿ 12 ಗಂಟೆ ನಿಜ​ವೇ?

ಸ್ವಲ್ಪನೂ ಕಾಮನ್‌ ಸೆನ್ಸ್‌ ಇಲ್ವೇನ್ರಿ ಇಲ್ವೆನ್ರಿ ನಿಮಗೆ, ಮೊದಲಿನಿಂದಲೂ ನೀವು ಬಹಳ ನಾಟಕ ಆಡ್ತಾ ಇದ್ದೀರಿ ಎಂದರಲ್ಲದೆ, ನಾನೇ ಕಂಪ್ಲೆಂಟ್‌ ಕೊಡ್ತಿದ್ದೀನಿ, ಅವರ ಮೇಲೆ ಕೇಸು ದಾಖಲಿಸಿ ಎಂದು ಎಸ್ಪಿಗೆ ಸೂಚಿಸಿದರು.

Follow Us:
Download App:
  • android
  • ios