Asianet Suvarna News Asianet Suvarna News

ರಾಮ​ನ​ಗರ: ಪ್ರವಾ​ಸೋ​ದ್ಯಮ ಹೂಡಿ​ಕೆ​ದಾ​ರರ ಸಮಾ​ವೇಶ ಯಶಸ್ವಿ

ಜಿಲ್ಲಾ​ಡ​ಳಿತ ನಾಲ್ಕು ಹಂತ​ಗ​ಳಲ್ಲಿ ಪ್ರವಾ​ಸೋ​ದ್ಯಮವನ್ನು ಅಭಿ​ವೃ​ದ್ಧಿ ಪಡಿ​ಸಲು ಉದ್ದೇ​ಶಿ​ಸಿದ್ದು, ಇದ​ರಲ್ಲಿ ಮಂಚ​ನ​ಬೆಲೆ, ಕಣ್ವ, ಇಗ್ಗ​ಲೂರು, ಸಂಗಮ ಪ್ರದೇ​ಶ​ಗ​ಳನ್ನು ಕ್ರಮ​ವಾಗಿ ಆಯ್ಕೆ ಮಾಡಿ​ಕೊ​ಳ್ಳ​ಲಾ​ಗಿದೆ ಎಂದ ಡಿಸಿ ಅವಿ​ನಾಶ್‌ 

Tourism Investors Summit Successful in Ramanagara grg
Author
Bengaluru, First Published Jul 30, 2022, 11:02 AM IST

ರಾಮ​ನ​ಗರ(ಜು.30):  ರೇಷ್ಮೆ​ನ​ಗರಿ ರಾಮ​ನ​ಗರ ಜಿಲ್ಲೆ​ಯಲ್ಲಿ ಪ್ರವಾ​ಸೋ​ದ್ಯ​ಮಕ್ಕೆ ವಿಫುಲ ಅವ​ಕಾ​ಶ​ಗ​ಳಿದ್ದು, ಇಲ್ಲಿ ಆತಿ​ಥ್ಯೋ​ದ್ಯಮ ಮತ್ತು ಸಾಹಸ ಕ್ರೀಡೆ​ಗಳ ಪ್ರವಾ​ಸೋ​ದ್ಯ​ಮ​ದಲ್ಲಿ ಬಂಡ​ವಾಳ ಹೂಡಲು ಅನು​ಕೂ​ಲ​ವಾ​ಗು​ವಂತೆ ಬಂಡ​ವಾಳ ಹೂಡಿ​ಕೆ​ದಾ​ರ​ರನ್ನು ಆಕ​ರ್ಷಿ​ಸುವ ನಿಟ್ಟಿ​ನಲ್ಲಿ ನಡೆದ ರಾಮ​ನ​ಗರ ಪ್ರವಾ​ಸೋ​ದ್ಯಮ ಹೂಡಿ​ಕೆ​ದಾ​ರರ ಸಮಾ​ವೇಶ ಯಶ​ಸ್ವಿ​ಯಾಗಿ ನಡೆ​ಯಿತು. ಕಾವೇರಿ ವನ್ಯ​ಜೀವಿ ಧಾಮದ ತಪ್ಪ​ಲಿ​ನ​ಲ್ಲಿ​ರುವ ಕನ​ಕ​ಪುರ ಗಾಳಿ​ಬೋರೆಯಲ್ಲಿ​ರುವ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಚ್‌ನಲ್ಲಿ ಜಿಲ್ಲಾ ಉಸ್ತು​ವಾರಿ ಸಚಿವ ಡಾ.ಸಿ.​ಎನ್‌ .ಅ​ಶ್ವತ್ಥ ನಾರಾ​ಯ​ಣ​ ಆಶ​ಯ​ದಂತೆ ಜಿಲ್ಲಾ​ಡ​ಳಿತ ಹಾಗೂ ಪ್ರವಾ​ಸೋ​ದ್ಯಮ ಇಲಾಖೆ ಸಹ​ಯೋ​ಗ​ದಲ್ಲಿ ಆಯೋ​ಜಿ​ಸಿದ್ದ ಪ್ರವಾ​ಸೋ​ದ್ಯಮ ಹೂಡಿ​ಕೆ​ದಾ​ರರ ಸಮಾ​ವೇ​ಶ​ದಲ್ಲಿ ಪ್ರವಾ​ಸೋ​ದ್ಯ​ಮದ ಅಭಿ​ವೃದ್ಧಿ, ಬಂಡ​ವಾ​ಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿ ಕುರಿತು ವಿಸ್ತೃತವಾಗಿ ಚರ್ಚಿಸ​ಲಾ​ಯಿತು.

ಸಚಿವ ಡಾ.ಸಿ.​ಎನ್‌.ಅಶ್ವತ್ಥ ನಾರಾ​ಯಣ, ಜಿಲ್ಲಾ​ಧಿ​ಕಾರಿ ಅವಿ​ನಾಶ್‌ ಮನನ್‌ ರಾಜೇಂದ್ರನ್‌ ಹಾಗೂ ಪ್ರವಾ​ಸೋ​ದ್ಯಮ ಇಲಾಖೆ ಹಿರಿಯ ಅಧಿ​ಕಾ​ರಿ​ಗಳು ರಾಮ​ನ​ಗರ ಜಿಲ್ಲೆ​ಯಲ್ಲಿ ಪ್ರವಾ​ಸೋ​ದ್ಯಮ ಅಭಿ​ವೃ​ದ್ಧಿಗಿರುವ ಅನು​ಕೂ​ಲ​ಕರ ವಾತಾ​ವ​ರಣವನ್ನು ಹೂಡಿ​ಕೆ​ದಾ​ರ​ರಿಗೆ ಮನ​ದಟ್ಟು ಮಾಡಿ​ಕೊ​ಡುವ ಮೂಲಕ ಇಲ್ಲಿಯ ಪ್ರವಾ​ಸೋ​ದ್ಯ​ಮಕ್ಕೆ ಬಂಡ​ವಾಳ ಹೂಡಿ​ಕೆಗೆ ಮುಕ್ತ ಮನ​ಸ್ಸಿ​ನಿಂದ ಸ್ವಾಗ​ತಿಸಿದ​ರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಹೂಡಿಕೆದಾರರ ಸಮಾವೇಶ: ಸಚಿವ ಅ​ಶ್ವತ್ಥ ನಾರಾ​ಯಣ

ಜಿಲ್ಲೆಯ ಪ್ರವಾಸಿ ತಾಣ​ಗಳ ಕುರಿತು ಪ್ರಸೆಂಟೇ​ಷನ್‌ ಮೂಲಕ ಹೂಡಿ​ಕೆ​ದಾ​ರ​ರಿಗೆ ವಿವ​ರಣೆ ನೀಡಿದ ಜಿಲ್ಲಾ​ಧಿ​ಕಾರಿ ಅವಿ​ನಾಶ್‌, ರಾಮನಗರ ಜಿಲ್ಲೆಯು ಮುತ್ತತ್ತಿ , ಸಂಗಮ, ಮೇಕೆದಾಟುಗಳಂತಹ ನದಿತೀರ ಪ್ರದೇಶಗಳು, ಸಾವನದುರ್ಗ, ರಾಮದೇವರ ಬೆಟ್ಟಹಾಗೂ ಅರಣ್ಯ ಪ್ರದೇಶಗಳಿಂದ ಕೂಡಿದೆ. ಅಲ್ಲದೆ ಜಿಲ್ಲೆಯಲ್ಲಿ ಕಾವೇರಿ , ಶಿಂಷಾ, ಅರ್ಕಾವತಿ ಸೇರಿದಂತೆ ಸಣ್ಣಪುಟ್ಟನದಿಗಳು ಹರಿಯುತ್ತಿವೆ. ಸಂಪತ್ಭರಿತವಾದ ವನ್ಯ ಸಂಪತ್ತಿನಿಂದ ಕಂಗೊಳಿಸುತ್ತಿದೆ. ಜಲ​ಸಾ​ಹಸ ಕ್ರೀಡೆ​ಗ​ಳಿಗೆ ಕಣ್ವ, ಇಗ್ಗ​ಲೂರು, ಮಂಚನಬೆಲೆ, ತಿಪ್ಪಗೊಂಡನಹಳ್ಳಿಗಳಂತಹ ಜಲಾಶಯಗಳು ಇವೆ. ಹೀಗೆ ಹತ್ತು ಹಲವು ಬಗೆಯಲ್ಲಿ ಪ್ರವಾಸಿಗರನ್ನು ಆಕ​ರ್ಷಿ​ಸಬ​ಹುದಾಗಿದೆ ಎಂದ​ರು.

ಪ್ರವಾಸಿಗರನ್ನು ಸೆಳೆಯಲು ಗುಡ್ಡಗಾಡು ಪ್ರದೇಶದಲ್ಲಿ ಪರ್ವ​ತಾ​ರೋ​ಹ​ಣ, ಸೈಕ್ಲಿಂಗ್‌ ಹಾಗೂ ಟ್ರೆಕ್ಕಿಂಗ್‌ ಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ. ಮೈಕ್ರೋಲೈಟ್‌ ಏರ್‌ ಕ್ರಾಫ್ಟ್‌ , ಮ್ಯಾರಥಾನ್‌, ವಾಕ್‌ ಥಾನ್‌, ಚನ್ನ​ಪ​ಟ್ಟ​ಣದ ಬೊಂಬೆ, ಸಿಲ್ಕ್‌ ಟೂರಿಸಂ, ವೈನ್‌ ಟೂರಿ​ಸಂ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ ಅಲ್ಲಿಗೂ ಪ್ರವಾಸ ಕೈಗೊಳ್ಳಲು ಅಭಿವೃದ್ಧಿ ಪಡಿಸಬಹುದಾಗಿದೆ .

ಜಿಲ್ಲಾ​ಡ​ಳಿತ ನಾಲ್ಕು ಹಂತ​ಗ​ಳಲ್ಲಿ ಪ್ರವಾ​ಸೋ​ದ್ಯಮವನ್ನು ಅಭಿ​ವೃ​ದ್ಧಿ ಪಡಿ​ಸಲು ಉದ್ದೇ​ಶಿ​ಸಿದ್ದು, ಇದ​ರಲ್ಲಿ ಮಂಚ​ನ​ಬೆಲೆ, ಕಣ್ವ, ಇಗ್ಗ​ಲೂರು, ಸಂಗಮ ಪ್ರದೇ​ಶ​ಗ​ಳನ್ನು ಕ್ರಮ​ವಾಗಿ ಆಯ್ಕೆ ಮಾಡಿ​ಕೊ​ಳ್ಳ​ಲಾ​ಗಿದೆ ಎಂದು ಅವಿ​ನಾಶ್‌ ತಿಳಿ​ಸಿ​ದರು.
ಪ್ರವಾ​ಸೋ​ದ್ಯಮ ಇಲಾಖೆ ಅಧಿ​ಕಾರಿಗಳು ರಾಜ್ಯ​ದಲ್ಲಿ ಜಾರಿಗೆ ಬಂದಿ​ರುವ ಕರ್ನಾ​ಟಕ ಪ್ರವಾ​ಸೋ​ದ್ಯಮ ನೀತಿ 2020-25 ಮೂಲಕ ಬಂಡ​ವಾಳ ಹೂಡಿಕೆ ಮತ್ತು ಸ್ಥಳೀ​ಯ​ವಾ​ಗಿಯೇ ಉದ್ಯೋ​ಗಾ​ವ​ಕಾಶ ಸೃಷ್ಟಿ​ಸುವ ಗುರಿ ಹೊಂದ​ಲಾ​ಗಿದೆ. ಇದ​ಕ್ಕಾ​ಗಿಯೇ 26 ಬಗೆಯ ಪ್ರವಾಸಿ ಯೋಜ​ನೆ​ಗ​ಳಿವೆ ಎಂದು ವಿವ​ರಿ​ಸಿ​ದ​ರು.

ರಾಮ​ನ​ಗರ ಜಿಲ್ಲೆ ಪ್ರವಾಸೋದ್ಯ​ಮಕ್ಕೆ ಹೇಳಿ ಮಾಡಿ​ಸಿ​ದಂತಹ ತಾಣ. ಇಲ್ಲಿ ಕೆಲ ಪ್ರವಾ​ಸಿ ಯೋಜ​ನೆ​ಗ​ಳಿಗೆ ಹಣ​ಕಾ​ಸಿನ ನೆರ​ವಿನ ಜೊತೆಗೆ ಸಬ್ಸಿ​ಡಿಯೂ ಸಿಗ​ಲಿದೆ. ಇಲಾಖೆ ಯಿಂದ ಸಿಗುವ ಸವ​ಲತ್ತು, ನೋಂದಣಿ ಹಾಗೂ ಸಹ​ಕಾ​ರದ ಬಗ್ಗೆ ಹೂಡಿ​ಕೆ​ದಾ​ರ​ರಿಗೆ ಮನ​ದಟ್ಟು ಮಾಡಿ​ಕೊ​ಟ್ಟ​ರು.

ಈ ಬಗ್ಗೆ ಆಸಕ್ತಿವಹಿಸಿದ ಹೂಡಿಕೆದಾರರು, ನಮಗೆ ಸರ್ಕಾರದಿಂದ ಸೌಕರ್ಯಗಳನ್ನು ಕಲ್ಪಿ​ಸು​ವು​ದರ ಜತೆಗೆ ಹೋಟೆಲ್‌ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ಉದ್ಯೋಗದೊಂದಿಗೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಸರ್ಕಾರ ಮತ್ತು ಅಧಿ​ಕಾ​ರಿ​ಗಳ ಸಹ​ಕಾರ ಇದ್ದರೆ ಮಾತ್ರ ಪ್ರವಾ​ಸೋ​ದ್ಯ​ಮದ ಅಭಿ​ವೃದ್ಧಿ ಸಾಧ್ಯ ಎಂದು ಅಭಿಪ್ರಾಯಗಳನ್ನು ಹಂಚಿಕೊಂಡರು. ಆರ್ಥಿಕ ಇಲಾಖೆ ಉಪ ಕಾರ್ಯ​ದರ್ಶಿ ಇಕ್ರಂ, ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಸಂತೋಷ್‌ ಹಾಜ​ರಿ​ದ್ದ​ರು.

ತರಬೇತಿ ವಿಮಾನಕ್ಕೆ ಎಂಜಿನ್‌ ಪೂರೈಕೆಗಾಗಿ ಹನಿವೆಲ್‌ನೊಂದಿಗೆ HAL 800 ಕೋಟಿ ಒಪ್ಪಂದ

ಕಾಳಿಬೋರೆ ಪಿಶಿಂಗ್‌ ಕ್ಯಾಂಪ್‌ ನಲ್ಲಿ ಪ್ರವಾ​ಸೋದ್ಯಮ ಹೂಡಿ​ಕೆ​ದಾ​ರರ ಸಮಾ​ವೇಶ ಮುಗಿದ ನಂತರ ಜಿಲ್ಲಾ ಉಸ್ತು​ವಾರಿ ಸಚಿವ ಅಶ್ವತ್ಥ ನಾರಾ​ಯಣ ಅವರು ತೆಪ್ಪ​ದಲ್ಲಿ ಸುಮಾರು 8ರಿಂದ 9 ಕಿ.ಮೀ ಕಾವೇರಿ ನದಿ​ಯಲ್ಲಿ ಸಾಗಿ ಸಂಗಮದವರೆಗೂ ಪ್ರಕೃತಿ ಸೌಂದರ್ಯ ಸವಿದರು.

ರಾಮ​ನ​ಗರ ಜಿಲ್ಲೆ ಅಡ್ವೆಂಚರ್‌ ಆಕ್ಟಿ​ವಿ​ಟಿಗೆ ಹೇಳಿ ಮಾಡಿ​ಸಿದ ಜಾಗ. ಪ್ರವಾ​ಸಿ​ಗ​ರಿ​ಗಾಗಿ ಸ್ಟಾರ್‌ ಹೋಟೆಲ್‌ ಗಳು ತಲೆ ಎತ್ತಿ​ದರೆ ರಾಮ​ನ​ಗ​ರ​ವನ್ನು ಅಂತರ ರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣ​ವ​ನ್ನಾಗಿ ಕಾಣ​ಬ​ಹು​ದಾ​ಗಿದೆ. ಪ್ರವಾ​ಸೋ​ದ್ಯ​ಮದ ಅಭಿ​ವೃ​ದ್ಧಿ​ಗೊ​ಳಿ​ಸುವ ನಿಟ್ಟಿ​ನಲ್ಲಿ ಸಿಂಗಲ್‌ ವಿಂಡೋ ಸಿಸ್ಟಂ ಅನ್ನು​ ಯಾವುದೇ ಸಮಸ್ಯೆ ಇದ್ದರು ಬಗೆ​ಹ​ರಿ​ಸು​ವಂತೆ ಬಲ ಪಡಿ​ಸ​ಬೇಕು. ವಿವಿಧ ಇಲಾ​ಖೆ​ಗ​ಳ​ಲ್ಲಿನ ಪಾಲಿಸಿಗಳಲ್ಲಿ ಬದ​ಲಾ​ವಣೆ ತಂದು​ಕೊ​ಳ್ಳ​ಬೇಕು. ಇಲಾಖೆಗಳ ನಡು​ವಿನ ವ್ಯತ್ಯ​ಸದಲ್ಲಿ ಹೂಡಿ​ಕೆ​ದಾ​ರ​ನನ್ನು ಬಲಹೀನಗೊಳಿ​ಸುವ ಕೆಲಸ ಆಗ​ಬಾ​ರದು. ಸರ್ಕಾರ ಪ್ರವಾ​ಸೋ​ದ್ಯಮ ಅಭಿ​ವೃ​ದ್ಧಿಗೆ ಪೂರ​ಕ​ವಾದ ಯೋಜ​ನೆ​ಗ​ಳನ್ನು ರೂಪಿಸಿ ಹೂಡಿ​ಕೆ​ದಾ​ರ​ರಿಗೆ ಅವ​ಕಾಶ ಕಲ್ಪಿ​ಸ​ಬೇಕು ಅಂತ ಶಿಲ್ಹಾಂಧರ ಎಕೋ  ಟೂರಿಸಂ ವ್ಯವ​ಸ್ಥಾ​ಪಕ ನಿರ್ದೇ​ಶ​ಕ ಸಾ.ನಾ.​ರ​ಮೇಶ್‌ ತಿಳಿಸಿದ್ದಾರೆ. 

Follow Us:
Download App:
  • android
  • ios