ಸದ್ಗುರು ಹೇಳಿಕೆಗೆ ಧ್ವನಿಗೂಡಿಸಿದ ಶಶಿ ತರೂರ್: ಆದರೆ....!
ಸಿಎಎ ವಿರೋಧಿ ಪ್ರತಿಭಟನೆಯನ್ನು ಟೀಕಿಸಿದ್ದ ಸದ್ಗುರು |‘ಪ್ರತಿಭಟನೆಯಿಂದಾಗಿ ವಿದೇಶಿ ಹೂಡಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ’| ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ತಿರುಗೇಟು ನೀಡಿದ ಶಶಿ ತರೂರ್ | ವಿದೇಶಿ ಹೂಡಿಕೆ ಬರದಿರಲು ಕೇಂದ್ರ ಸರ್ಕಾರದ ನೀತಿ ಕಾರಣ ಎಂದ ಕಾಂಗ್ರೆಸ್ ಸಂಸದ| ಕೇಂದ್ರ ಸರ್ಕಾರ ಧರ್ಮದ ಆಧಾರದ ಮೇಲೆ ಒಡೆಯುತ್ತಿದೆ ಎಂದ ತರೂರ್|
ನವದೆಹಲಿ(ಜ.23): ಸಿಎಎ ವಿರೋಧಿ ಪ್ರತಿಭಟನೆಯನ್ನು ಟೀಕಿಸಿದ್ದ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ತಿರುಗೇಟು ನೀಡಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆಯಿಂದಾಗಿ ವಿದೇಶಿ ಹೂಡಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದರು.
ಇದಕ್ಕೆ ಸೂಕ್ತ ತಿರುಗೇಟು ನೀಡಿರುವ ಶಶಿ ತರೂರ್, ಹೌದು ಸದ್ಗುರು ಭಾರತಕ್ಕೆ ವಿದೇಶಿ ಹೂಡಿಕೆ ಬರುವುದಿಲ್ಲ. ಇದಕ್ಕೆ ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುತ್ತಿರುವ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಶಿ ತರೂರ್, ಸದ್ಗುರು ಹೇಳಿದ್ದು ನಿಜ ಹೌದಾದರೂ, ವಿದೇಶಿ ಹೂಡಿಕೆ ಬರದಿರುವುದಕ್ಕೆ ಸಿಎಎ ವಿರೋಧಿ ಪ್ರತಿಭಟನೆ ಕಾರಣವಲ್ಲ. ಬದಲಿಗೆ ಇಡೀ ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆದು, ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ.
ರಸ್ತೆಯಲ್ಲಿ ಬಸ್ಗಳು ಸುಡುತ್ತಿರುವ ದೇಶಕ್ಕೆ ವಿದೇಶಿ ಹೂಡಿಕೆ ಬರಲ್ಲ: ಸದ್ಗುರು!
ದಾವೋಸ್’ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಸದ್ಗುರು ಜಗ್ಗಿ ವಾಸುದೇವ್, ದೇಶದ ರಸ್ತೆಗಳಲ್ಲಿ ಬಸ್’ಗಳು ಸುಡುತ್ತಿದ್ದರೆ ವಿದೇಶಿ ಹೂಡಿಕೆ ಹೇಗೆ ಬರಲು ಸಾಧ್ಯ ಎಂದು ಪ್ರಶ್ನಿಸಿದ್ದರು.