ಬೆಂಗಳೂರು: ಪತ್ನಿ, ಶ್ವಾನ ಹತ್ಯೆ ಮಾಡಿ ಮಹಡಿಯಿಂದ ಜಿಗಿದ ಪತಿ
ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿ ಹೆಂಡತಿ ಮತ್ತು ತನ್ನ ಮನೆಯ ಶ್ವಾನವನ್ನು ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರು[ಏ. 02] ಪತ್ನಿಯನ್ನು ಹತ್ಯೆ ಮಾಡಿ ನಂತರ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಸದಾಶಿವನಗರದಲ್ಲಿ ನಡೆದಿರುವ ಘಟನೆ ಸಿಲಿಕಾನ್ ಸಿಟಿ ಜನರನ್ನು ಒಂದು ಕ್ಷಣ ಆತಂಕಕ್ಕೆ ದೂಡುವಂತೆ ಮಾಡಿದೆ.
ನಗರದ ಸದಾಶಿವನಗರದ ಅಪಾರ್ಟ್ ಮೆಂಟ್ ನಲ್ಲಿ ಘಟನೆ ಅತುಲ್ ಉಪಾಧ್ಯಾಯ ಎಂಬಾತ ಹೆಂಡತಿಯನ್ನು ಕೊಂದು ನಂತರ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನ ನೋಡಿ ಪತಿಯೂ ಆತ್ಮಹತ್ಯೆ, ಅನಾಥವಾದ ಹಸುಳೆ
ಪತ್ನಿ ಮಮತಾ ಉಪಾಧ್ಯಾಯ ಅವರನ್ನು ಮನೆಯಲ್ಲಿಯೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ತನ್ನ ಮನೆಯ ನಾಯಿಯನ್ನು ಕೆಳಗೆ ಎಸೆದು ಹತ್ಯೆ ಮಾಡಿದ್ದಾನೆ. ಬಳಿಕ ತಾನು ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಂಜಯ್ ಉಪಾಧ್ಯಾಯ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇದರಿಂದ ಮಾನಸಿಕ ಖಿನ್ನತೆಗೊಳಗಾಗಿ ಪತ್ನಿ ,ನಾಯಿಯನ್ನ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.