ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯದಲ್ಲಿ ಮನಸ್ತಾಪ ಸಾಧ್ಯತೆ
22 ಫೆಬ್ರವರಿ 2020, ಶನಿವಾರದ ದಿನ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಒಳಿತು? ಇಲ್ಲಿದೆ ಇಂದಿನ ರಾಶಿಫಲ
ಮೇಷ: ಸ್ತ್ರೀಯರ ವಿಚಾರವಾಗಿ ಎಚ್ಚರಿಕೆ ಅಗತ್ಯ, ಆರೋಗ್ಯದಲ್ಲಿ ಎಚ್ಚರ ಇರಲಿ, ಅಸಮಧಾನ, ಮಾನಸಿಕ ಅಸಮಧಾನವಿರಲಿದೆ, ಶಿವಾರಾಧನೆ ಮಾಡಿ
ವೃಷಭ: ಸಂಪತ್ತು, ವಾಹನ, ವಸ್ತ್ರ ಸೌಕರ್ಯ, ವ್ಯಾಪಾರದಲ್ಲಿ ಲಾಭ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಕುಲದೇವತಾರಾಧನೆ ಮಾಡಿ
ಮಿಥುನ: ಪಾಂಡಿತ್ಯದಲ್ಲಿ ಯಶ್ಸಸ್ಸು, ಉತ್ತಮ ಫಲವಿರುವ ದಿನ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಹಣಕಾಸಿಗೆ ಕೊಂಚ ತೊಂದರೆ, ಹರಿಹರರ ಧ್ಯಾನ ಮಾಡಿ
ಕಟಕ: ಗಂಡ-ಹೆಂಡಿರಲ್ಲಿ ಮಾನಸಿಕ ಅಸಮಧಾನ, ನಿಧಾನವಾಗಿ ಆಲೋಚಿಸಿ ನಿರ್ಧಾನ ತೆಗೆದುಕೊಳ್ಳುವುದು ಉತ್ತಮ, ಶನಿ-ಚಂದ್ರರ ಪೀಡಾ ಪರಿಹಾರ ಸ್ತೋತ್ರ ಪಠಿಸಿ
ಸಿಂಹ: ಶುಭಫಲಗಳಿದ್ದಾವೆ, ಗುರುವಿನ ಅನುಗ್ರಹ ಸಿಗಲಿದೆ, ಮಾತಿನಲ್ಲಿ ಎಚ್ಚರಿಕೆ ಇರಲಿ, ದಾಂಪತ್ಯದಲ್ಲಿ ವಿರಸ, ಈಶ್ವರ ಪ್ರಾರ್ಥನೆ ಮಾಡಿ
ವಾರ ಭವಿಷ್ಯ : ಈ ರಾಶಿಯವರಿಗಿದೆ ಭರ್ಜರಿ ಯೋಗ
ಕನ್ಯಾ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಉತ್ತಮ ಮಾನ್ಯತೆ ಸಿಗಲಿದೆ, ಗೌರವ ಪ್ರಾಪ್ತಿ, ಮಕ್ಕಳಿಂದ ಮನಸ್ಸಿಗೆ ನೋವು, ಈಶ್ವರ ಪ್ರಾರ್ಥನೆ ಮಾಡಿ
ತುಲಾ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ, ಪ್ರಯಾಣದಲ್ಲಿ ಎಚ್ಚರಿಕೆ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ
ವೃಶ್ಚಿಕ: ಉತ್ತಮ ಗುಣಗಳೂ ಇದ್ದಾವೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸಾಹಸಕಾರ್ಯಗಳಲ್ಲಿ ಅಧೈರ್ಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಧನಸ್ಸು: ಕುಟುಂಬದವರ ಸಲುವಾಗಿ ನೋವು, ಹಿರಿಯರ ಮಾರ್ಗದರ್ಶನ ಪಡೆಯಿರಿ, ಹಣಕಾಸಿನ ವ್ಯವಹಾರದಲ್ಲಿ ತಟಸ್ಥವಾಗಿರುವುದು ಒಳಿತು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮಕರ: ದಾಂಪತ್ಯದಲ್ಲಿ ಮನಸ್ತಾಪ ಸಾಧ್ಯತೆ, ವ್ಯವಹಾರದಲ್ಲಿ ನೋವು, ಪ್ರಯಾಣದಲ್ಲಿ ತೊಡಕು, ಎಚ್ಚರಿಕೆ ಬೇಕು, ಶಿವಾರಾಧನೆ ಮಾಡಿ
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ನಿರ್ಧಾರಗಳಲ್ಲಿ ಬದಲಾವಣೆ, ಸ್ತ್ರೀಯರಿಂದ ಸಲಹೆ, ಹಣಕಾಸಿನ ಸಮೃದ್ಧಿ, ಗಾಯಕರಿಗೆ ವಿಶೇಷ ದಿನ, ಕೃಷ್ಣ ಪ್ರಾರ್ಥನೆ ಮಾಡಿ
ಮೀನ: ಉತ್ತಮ ಫಲಗಳಿದ್ದಾವೆ, ಸಂಪತ್ತು, ವಾಹನ ಸೌಖ್ಯ, ಆಡಳಿತ ಶಕ್ತಿ ಚುರುಕಾಗಲಿದೆ, ಹರಿಹರರ ಧ್ಯಾನ ಮಾಡಿ