ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸು ಹಾಗೂ ಮಾತಿನಲ್ಲಿ ಎಚ್ಚರಿಕೆ ಬೇಕು
13 ಜುಲೈ 20 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ: ಉದ್ಯೋಗಿಗಳಿಗೆ ಸಮಾಧಾನದ ದಿನ, ಮಾನಸಿಕವಾಗಿ ಕೊಂಚ ಕುಗ್ಗುವ ಸಾಧ್ಯತೆ, ದುರ್ಗಾಪರಮೇಶ್ವರಿ ಪ್ರಾರ್ಥನೆ ಮಾಡಿ
ವೃಷಭ: ಶುಭಫಲಗಳನ್ನು ಅನುಭವಿಸುವಿರಿ, ಮಾನಸಿಕ ಸಮಾಧಾನ, ಸಹೋದರರಿಂದ ಸಹಕಾರ, ದಾಂಪತ್ಯದಲ್ಲಿ ಕೊಂಚ ಏರುಪೇರು, ಸೌಂದರ್ಯಲಹರಿ ಪಠಿಸಿ
ಮಿಥುನ: ಉದ್ಯೋಗಿಗಳಿಗೆ ಭದ್ರತೆ, ಸ್ತ್ರೀಯರ ಸಹಕಾರ, ಶುಭಫಲಗಳಿದ್ದಾವೆ, ಆರೋಗ್ಯದ ಕಡೆ ಗಮನವಹಿಸಿ, ಮನ್ಯುಸೂಕ್ತ ಪಾರಾಯಣ ಮಾಡಿ ಅಥವ ಶ್ರವಣ ಮಾಡಿ
ಕಟಕ: ಸ್ತ್ರೀಯರಿಗೆ ಸಕಲ ಸಮೃದ್ಧಿ, ಮಕ್ಕಳ ಸಲುವಾಗಿ ಹೋರಾಟ, ಸಮಾಧಾನವೂ ಇರಲಿದೆ, ದುರ್ಗಾ ಪ್ರಾರ್ಥನೆ ಮಾಡಿ
ಸಿಂಹ: ಕೊರತೆ ಇರುವುದಿಲ್ಲ, ಸ್ತ್ರೀಯರಿಗೆ ಶುಭದಾಯಕ ದಿನ, ಸುಖಕ್ಕೆ ಕೊಂಚ ಕತ್ತರಿ ಬೀಳಲಿದೆ, ಕೇಷಿ ಕಾರ್ಯಗಳಿಗೆ ವಿಘ್ನ, ಜಲದೇವತೆಯ ಪ್ರಾರ್ಥನೆ ಮಾಡಿ
ಕನ್ಯಾ: ಸಂಗಾತಿಯಿಂದ ಸಹಕಾರ, ಮನಸ್ಸಿಗೆ ಸಮಾಧಾನ, ಸಹೋದರರಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ತುಲಾ: ಹಣಕಾಸು ಹಾಗೂ ಮಾತಿನಲ್ಲಿ ಎಚ್ಚರಿಕೆ ಬೇಕು, ಭಯ ಬೇಡ, ದುರ್ಗಾ ದೇವಿಯ ಪ್ರಾರ್ಥನೆ ಮಾಡಿ
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ವ್ಯಾಪಾರಿಗಳಿಗೆ ಲಾಭದ ದಿನ, ಹಣಕಾಸಿನ ತೊಡಕಿರುವುದಿಲ್ಲ, ಸುಬ್ರಹ್ಮಣ್ಯ ಸ್ತೋತ್ರ ಪಠಿಸಿ
ವಾರ ಭವಿಷ್ಯ: ಈ ರಾಶಿಯವರು ದೊಡ್ಡವರ ಗಮನ ಸೆಳೆಯಲು ವಿಫಲ!
ಧನಸ್ಸು: ಸುಖ ಸಮೃದ್ಧಿಯ ದಿನ, ಸಮಾಧಾನದ ದಿನ, ದ್ರವ ವ್ಯಾಪಾರಿಗಳಿಗೆ ಅನುಕೂಲ, ತಾಯಿಯಿಂದ ಸಹಕಾರ, ಪಿತೃದೇವತೆಗಳ ಆರಾಧನೆ ಮಾಡಿ
ಮಕರ: ಸಹೋದರರಿಂದ ಸಹಕಾರ, ನಿರಾಳತೆ ಇರಲಿದೆ, ಶುಭದಿನ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ
ಕುಂಭ: ಸುಗ್ರಾಸ ಭೋಜನ, ಕುಟುಂಬದಲ್ಲಿ ಉತ್ತಮ ವಾತಾವರಣ, ಮನೆಯಲ್ಲಿ ಸಾಮರಸ್ಯವಿರಲಿದೆ, ಈಶ್ವರ ಪ್ರಾರ್ಥನೆ ಮಾಡಿ
ಮೀನ: ಮನಸ್ಸಿಗೆ ಸಮಾಧಾನ, ಶ್ರಮ ಜೀವಿಗಳಿಗೆ ಲಾಭ, ಸಹೋದರರಿಂದ ಸಹಕಾರ, ವ್ಯಸನಗಳಿಗೆ ತುತ್ತಾಗಬೇಡಿ, ಈಶ್ವರ ಪ್ರಾರ್ಥನೆ ಮಾಡಿ