ಕುಂಭಮೇಳ ಸುಂದರಿ ಸಾದ್ವಿ ಹರ್ಷಾ ರಿಚಾರಿಯಾ, ಹುಡುಗರಿಗಾಗಿ ಮಹತ್ವದ ಘೋಷಣೆ!
ಹರ್ಷಾ ರಿಚಾರಿಯಾ ಸಂಭಲ್ಗೆ ಭೇಟಿ
ಪ್ರಯಾಗ್ರಾಜ್ ಮಹಾಕುಂಭದಲ್ಲಿ ಸುಂದರ ಸಾಧ್ವಿ ಟ್ಯಾಗ್ ಪಡೆದ ಹರ್ಷಾ ರಿಚರಿಯಾ ನಿರಂತರವಾಗಿ ಚರ್ಚೆಯಲ್ಲಿದ್ದಾರೆ. ಅವರು ಇಂದು ಭಾಯಿದೂಜ್ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಂಭಲ್ ತಲುಪುತ್ತಿದ್ದಾರೆ.
ಹರ್ಷಾ ರಿಚರಿಯಾ ದೊಡ್ಡ ಘೋಷಣೆ
ಹರ್ಷಾ ರಿಚರಿಯಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು, ಹೋಳಿ ಹಬ್ಬ ಪವಿತ್ರ ಭಾಯಿದೂಜ್ ಸಂದರ್ಭದಲ್ಲಿ ನನ್ನ ಸನಾತನಿ ಸಹೋದರರಿಗೆ ತಿಲಕ ಹಚ್ಚಲು ಸಂಭಲ್ಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಸನಾತನಿ ಸಹೋದರರನ್ನು ಭೇಟಿಯಾಗುತ್ತೇನೆ
ಹರ್ಷಾ ರಿಚರಿಯಾ ನಾನು ಪ್ರತಿ ಬಾರಿ ಭಾಯಿದೂಜ್ಗೆ ಮನೆಗೆ ಹೋಗುತ್ತೇನೆ, ಈ ಬಾರಿ ನನ್ನ ಎಲ್ಲ ಸನಾತನಿ ಸಹೋದರ ಸಹೋದರಿಯರನ್ನು ಭೇಟಿಯಾಗಲು ಹೋಗಬೇಕು ಎಂದು ಮನಸ್ಸಿನಲ್ಲಿ ಆಲೋಚನೆ ಬಂದಿತು ಎಂದು ಹೇಳಿದ್ದಾರೆ.
ಸಂಭಲ್ನಲ್ಲಿ ಏನು ನಡೆಯಲಿದೆ
ಹರ್ಷಾ ಅವರು ಸಂಭಲ್ನಲ್ಲಿ ಸನಾತನಿ ಸಹೋದರ ಸಹೋದರಿಯರನ್ನು ಭೇಟಿಯಾಗುತ್ತಾರೆ.. ಭಾಯಿದೂಜ್ ದಿನ ಹರ ಹರ ಮಹಾದೇವ್, ಜೈ ಶ್ರೀರಾಮ್ ಘೋಷಣೆ ಮೊಳಗುತ್ತದೆ.
ಮಹಾಕುಂಭದಿಂದ ಪ್ರಸಿದ್ಧಿಯಾದ ಹರ್ಷಾ ರಿಚರಿಯಾ
ಹರ್ಷಾ ರಿಚರಿಯಾ 30 ವರ್ಷದ ಸಾದ್ವಿ ಆಗಿದ್ದಾಳೆ. ಮಹಾಕುಂಭದ ಸಮಯದಲ್ಲಿ ನಿರಂಜನಿ ಅಖಾಡದ ಪೇಶ್ವಾಯಿ ರಥದ ಮೇಲೆ ಬರುತ್ತಿದ್ದ ಹರ್ಷಾ ಸುದ್ದಿಯಾದರು. ಈ ಸಮಯದಲ್ಲಿ ಭಾರತದ ಸುಂದರ ಸಾಧ್ವಿ ಎಂಬ ಖ್ಯಾತಿ ಪಡೆದರು.
ಹರ್ಷಾ ರಿಚರಿಯಾ ಯಾರು?
ಹರ್ಷಾ ರಿಚರಿಯಾ ಮೂಲತಃ ಭೋಪಾಲ್ನವರು. ವೃತ್ತಿಯಲ್ಲಿ ಮಾಡೆಲ್, ನಿರೂಪಕಿ ಆಗಿದ್ದರು. ಅವರು ಸಾಧ್ವಿಯಾಗಿ ಮಹಾಕುಂಭಕ್ಕೆ ತಲುಪಿದಾಗ, ಸಂತ ಸಮಾಜವು ಆಕ್ಷೇಪಿಸಿತ್ತು. ಈ ಸಮಯದಲ್ಲಿ ಅವರನ್ನು ವಿರೋಧಿಸಲಾಯಿತು.