ಜನತಾ ದರ್ಶನಕ್ಕೆ ಕಾದಿದ್ದ ಜನರಿಗೆ ಸಿಎಂ ಕೊಟ್ಟದ್ದು ‘ಕಾಯುವ’ ಭಾಗ್ಯ!

Jun 17, 2019, 3:53 PM IST

ಚನ್ನಪಟ್ಟಣ (ಜೂ. 17): ಜನರ ಅಹವಾಲುಗಳನ್ನು ಸ್ವೀಕರಿಸಲು ಗ್ರಾಮ ವಾಸ್ತ್ಯವ್ಯಕ್ಕೆ ಮುಂದಾಗಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ, ಜನತಾ ದರ್ಶನ ಕಾರ್ಯಕ್ರಮವನ್ನೂ ಮುಂದುವರಿಸಿದ್ದಾರೆ. ಸಿಎಂ ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸೋಮವಾರ ಜನತಾ ದರ್ಶನ ಹಮ್ಮಿಕೊಂಡಿದ್ದು, ಬಂದ ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. 

ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಾಗಿದ್ದ ಜನತಾ ದರ್ಶನ, ಮಧ್ಯಾಹ್ನ 12 ಗಂಟೆಯಾದರೂ ಶುರುವಾಗಿಲ್ಲ. ಕಾರಣ... ಜನತಾ ದರ್ಶನ ಮಾಡಬೇಕಾಗಿದ್ದ ಸಿಎಂ ಪತ್ತೆನೇ ಇಲ್ಲ!

ಕುಮಾರಸ್ವಾಮಿ ಈ ಹಿಂದೆ ಸಿಎಂ ಆಗಿದ್ದಾಗ ಆರಂಭಿಸಿದ್ದ - ಸರ್ಕಾರವನ್ನು ಜನರ ಬಳಿ ಕೊಂಡೊಯ್ಯುವ ಕಾರ್ಯಕ್ರಮ ‘ಗ್ರಾಮ ವಾಸ್ತವ್ಯ’ವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯವನ್ನು ಮತ್ತೆ ಆರಂಭಿಸಲಿದ್ದಾರೆ. ಈ ಬಾರಿ ಅವರು ಯಾರ ಮನೆಯಲ್ಲೂ ಉಳಿದುಕೊಳ್ಳುತ್ತಿಲ್ಲ. ಭೇಟಿ ನೀಡುವ ಊರಿನ ಸರ್ಕಾರಿ ಶಾಲೆಯಲ್ಲೇ ಸಿಎಂ ವಾಸ್ತವ್ಯ ಹೂಡಲಿದ್ದಾರೆ.