ಶೋಭಾ ‘ಖೋಜಾ ಸರ್ಕಾರ’ ಹೇಳಿಕೆಗೆ ಕೃಷ್ಣ ಭೈರೇಗೌಡ ‘ಖಾರ’ ಬಾತ್!

Jun 15, 2019, 10:23 PM IST

ಕೋಲಾರ (ಜೂ.15): ‘ಕುಮಾರಿ ಶೋಭಾ ಕರಂದ್ಲಾಜೆ ಅದೇ ರೀತಿ ಅಂತ ಅವರ ಮಾತಿನಿಂದ ತೋರಿಸಿಕೊಟ್ಟಿದ್ದಾರೆ. ಎಲ್ಲರನ್ನು ಗೌರವದಿಂದ ಕಾಣಬೇಕಾಗಿರೋದು ನಮ್ಮ ಧರ್ಮ. ಆ ಸಮುದಾಯಕ್ಕೆ ಅವಮಾನ ಆಗೋ ರೀತಿಯಲ್ಲಿ ಪದ ಬಳಸಿದ್ದಾರೆ. ಮೇಲು ಕೀಳು ಅನ್ನೋ ಭಾವನೆಯಿಂದ ಅವರು ಇನ್ನು ಹೊರ ಬಂದಿಲ್ಲ. ಸಮಾನವಾಗಿ ಕಾಣೋ ಸೌಜನ್ಯ ಅವರಿಗಿಲ್ಲದೆ ಇರೋದು ದುರದೃಷ್ಟ. ಅವರು ತಿಳಿದುಕೊಳ್ತಾರೆ ಅನ್ನೋ ನಂಬಿಕೆಯೂ ನನಗಿಲ್ಲ. ಮುಂದೆ ಜನಾನೇ ಅವರ ಮದ ಇಳಿಸುತ್ತಾರೆ.’

ಮೈತ್ರಿ ಸರ್ಕಾರ ಖೋಜಾ ಸರ್ಕಾರ ಅಂತ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಕುರಿತು, ಕೋಲಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ನೀಡಿದ ಖಾರ ಪ್ರತಿಕ್ರಿಯೆ ಇದು!

ಮುಂದುವರಿದು, ‘ಪ್ರತಿಪಕ್ಷ ಬಿಜೆಪಿಗೆ ಅಧಿಕಾರದ ಮದ ತಲೆಗೇರಿದೆ. ಸಾರ್ವಜನಿಕ ಜೀವನಕ್ಕೆ ಲಾಯಕಿಲ್ಲ ಅನ್ನೋ ರೀತಿ ಹಿಂದೆಯಿಂದ ನಡೆದುಕೊಂಡು ಬರುತ್ತಿದ್ದಾರೆ. ಚುನಾವಣೆಯಲ್ಲಿ ಗೆಲುತ್ತಿದ್ದೇವೆ ಅಂತ ಅವರು ತಿಳಿದುಕೊಂಡಿದ್ದಾರೆ. ಜನ ಇದನ್ನು ಮನ್ನಿಸೋದಿಲ್ಲ ಅನ್ನೋದನ್ನ ಅವರು ಅರ್ಥ ಮಾಡಿಕೊಳ್ಳಬೇಕು. ಕೈ ಮುರಿತೀವಿ, ಕಾಲು ಮುರಿತೀವಿ, ನಾಲಿಗೆ ಸೀಳ್ತಿವಿ ಅಂತ ಈ ಹಿಂದೆಯು ಹೇಳಿದ್ರು. ಈ ರೀತಿಯ ಹೇಳಿಕೆ ಇದೇ ಮೊದಲೇನಲ್ಲ. ಅವರ ನಿಜವಾದ ಸಂಸ್ಕೃತಿ ಅದರಿಂದಲೇ ಗೊತ್ತಾಗುತ್ತೆ.’ ಎಂದು ಕೃಷ್ಣ ಭೈರೇಗೌಡ ಕುಟುಕಿದರು.