Weekend Curfew: ನಂದಿ ಬೆಟ್ಟಕ್ಕೆ ಬಂದವರಿಗೆ ನಿರಾಸೆ, ನೋ ಎಂಟ್ರಿ

Jan 23, 2022, 12:12 PM IST

ಬೆಂಗಳೂರಿನ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು. ಆದರೆ ಇದರಿಂದ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು ಮಾತ್ರವಲ್ಲದೆ ವ್ಯಾಪಾರಿಗಳಿಗೂ ಹೊಡೆತ ಬಿದ್ದಿತ್ತು. ಈ ನಿಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ತೆರವು ಮಾಡಲಾಗಿತ್ತು.  ಆದರೆ ಜನರು ಕರ್ಫ್ಯೂ ರದ್ದು ಮಾಡಿದ್ದೇ ತಡ ಪ್ರವಾಸಿ ತಾಣಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಜನರು ನಂದಿಬೆಟ್ಟಕ್ಕೆ ಬರುತ್ತಿದ್ದು ಪೊಲೀಸರು ಎಲ್ಲರನ್ನೂ ತಡೆದು ಹಿಂದಕ್ಕೆ ಕಳುಹಿಸುತ್ತಿದ್ದಾರೆ.

ಮತ್ತೆ ನಂದಿ ಬೆಟ್ಟ ಬಂದ್‌: ಹೊಸ ವರ್ಷಾಚರಣೆಗೆ ಬ್ರೇಕ್‌..!

ಚಿಕ್ಕಾಬಳ್ಳಾಪುರದಲ್ಲಿ ಮುಖ್ಯವಾಗಿ ನಂದಿಬೆಟ್ಟದಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ. ಒಮಿಕ್ರೋನ್, ಕೊರೋನಾ ಹೆಚ್ಚಳದಿಂದಾಗಿ ಜನರನ್ನು ನಿಯಂತ್ರಿಸಲ್ಪ ಕಷ್ಟಪಡುತ್ತಿದ್ದು ಎಲ್ಲರನ್ನೂ ಹಿಂದಕ್ಕೆ ಕಳುಹಿಸಲಾಗಿದೆ. ವೀಕೆಂಡ್ ಎಂಜಾಯ್ ಮಾಡಲೆಂದು ಬಂದವರೆಲ್ಲ ಈಗ ನಿರಾಸೆಯಿಂದ ಬೆಂಗಳೂರಿನತ್ತ ಹೊರಡುತ್ತಿದ್ದಾರೆ.