ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣ; ಖ್ಯಾತ ವೈದ್ಯ ಕುಟುಂಬದಿಂದ ಸರ್ಕಾರಕ್ಕೆ ಮಹಾವಂಚನೆ..?

Jan 30, 2021, 4:59 PM IST

ಬೆಂಗಳೂರು (ಜ. 30): ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಹತ್ತರ ದಾಖಲೆಗಳು ಲಭ್ಯವಾಗಿವೆ. 

ಖ್ಯಾತ ವೈದ್ಯ ಪಿ ಅರ್ ದೇಸಾಯಿ ಕುಟುಂಬ ಧರ್ಮಾಸ್ಪತ್ರೆಗಾಗಿ 3.36  ಎಕರೆ ಭೂಮಿ ಡಿನೋಟಿಫಿಕೇಶನ್ ಮಾಡಿದ್ದಾರೆ. ಆಸ್ಪತ್ರೆ ನಿರ್ಮಿಸಬೇಕಿದ್ದ ಜಾಗದಲ್ಲಿ ಅಪಾರ್ಟ್‌ಮೆಂಟ್ ಕಟ್ಟಲಾಗಿದೆ. ಇದನ್ನು ಪ್ರಶ್ನಿಸಿ PIL ಸಲ್ಲಿಸಲಾಗಿದ್ದು, ವರ್ಷ ಕಳೆದರೂ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಿಲ್ಲ. ಈ ಹಗರಣದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!