ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಇಳಿಮುಖ; ಭಾಗಮಂಡಲ ರಸ್ತೆ ಸಂಚಾರಕ್ಕೆ ಮುಕ್ತ

Aug 9, 2020, 5:11 PM IST

ಕೊಡಗು (ಆ. 09): ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಇಳಿಮುಖವಾಗಿದೆ. ಭಾಗಮಂಡಲ, ತ್ರಿವೇಣಿ ಸಂಗಮ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.  ಭಾರೀ ಮಳೆಯಿಂದಾಗಿ ಭಾಗಮಂಡಲ ಸೇತುವೆ ಮುಚ್ಚಿ ಹೋಗಿತ್ತು. ಇದೀಗ ನೀರು ಇಳಿಕೆಯಾಗಿದ್ದು ವಾಹನ ಸಂಚಾರಕ್ಕೆ ಮುಕ್ತವಾಗಿದೆ. 

ಭಾರೀ ಮಳೆಯಿಂದಾಗಿ ಭಾಗಮಂಡಲ ಜಲಾವೃತವಾಗಿತ್ತು. ಏನೂ ಅನಾಹುತವಾಗದಿರಲಿ ಎಂದು ನಿನ್ನೆ ಭಗಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಇಂದು ನೀರು ಇಳಿಕೆಯಾಗಿತ್ತು ಸ್ಥಳೀಯರಿಗೆ ತುಸು ನೆಮ್ಮದಿ ತಂದಿದೆ. 

ಕೆರೆ ಕಟ್ಟೆ ಒಡೆದು ಜಮೀನಿಗೆ ನುಗ್ಗಿದ ನೀರು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೂರಾರು ಎಕರೆ ಬೆಳೆ ನಾಶ