ಹುಸಿಯಾಯ್ತು ಅನ್‌ಲಾಕ್‌ ನಿರೀಕ್ಷೆ, ಮೆಜೆಸ್ಟಿಕ್ ಪಾಲಿಗೆ ಅನ್‌ಲಾಕ್ ಮರೀಚಿಕೆ..!

Aug 2, 2020, 1:15 PM IST

ಬೆಂಗಳೂರು(ಆ.02): ಸಂಡೇ ಲಾಕ್‌ಡೌನ್ ತೆರೆವಾದ ಹಿನ್ನೆಯಲ್ಲಿ ಸಾಕಷ್ಟು ಮಂದಿ ಪ್ರಯಾಣಕ್ಕೆ ಮುಂದಾಗುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಪ್ರಯಾಣಿಕರಿಲ್ಲದೇ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿದೆ.

ಆಗಸ್ಟ್ 01ರಿಂದಲೇ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಹಾಗೂ ಸಂಡೇ ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಹೀಗಿದ್ದೂ ಕೊರೋನಾ ಭೀತಿಯಿಂದಾಗಿ ಜನರು ಬಸ್‌ನಲ್ಲಿ ಪ್ರಯಾಣ ಮಾಡಲು ಹಿಂದೇಟು ಹಾಕುತ್ತಿದ್ದಾರೆ. 

ಇಂದಿನಿಂದ ಸಂಡೇ ಲಾಕ್‌ಡೌನ್‌ ಇಲ್ಲ, ರಾತ್ರಿ ಕರ್ಫ್ಯೂ ಕೂಡ ತೆರವು

ಭಾನುವಾರ ಬೆಳಗ್ಗೆ ಬಿಎಂಟಿಸಿ ಹಾಗೆಯೇ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು ಜನರಿಲ್ಲದೇ ಬಣಗುಡುತ್ತಿದ್ದ ದೃಶ್ಯಾವಳಿಗಳು ಕಂಡು ಬಂದಿದೆ. ಈ ಕುರಿತಾದ ಒಂದು ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.