ಅಖಂಡ ಪ್ರೀತಿಗೆ ಜೈ ಹೋ ಎಂದ ಪುಲಕೇಶಿ ನಗರದ ಜನತೆ

May 22, 2020, 6:53 AM IST

ಬೆಂಗಳೂರು: ಜನರಿಗೆ ಕಷ್ಟ ಅಂದರೆ ಸಾಕು ಇವರು ಕರಗಿ ಬಿಡುತ್ತಾರೆ. ತಮ್ಮ ಕ್ಷೇತ್ರದ ಜನರನ್ನೇ ಇವರು ಕುಟುಂಬ ಅಂದುಕೊಂಡಿದ್ದಾರೆ. ಸದಾ ಜನರ ಮಧ್ಯಯೇ ಬದುಕುತ್ತಿದ್ದಾರೆ. ಇವರು ಬೇರೆ ಯಾರು ಅಲ್ಲ ಬೆಂಗಳೂರು ಪುಲಕೇಶಿ ನಗರದ ಮನೆ ಮಗನಂತಿರುವ ಅಖಂಡ ಶ್ರೀನಿವಾಸ್ ಮೂರ್ತಿ

ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಲಾಕ್‌ಡೌನ್ ಜಾರಿಯಾಗಿ 2 ತಿಂಗಳು ಕಳೆದರೂ ತಮ್ಮ ಕ್ಷೇತ್ರದ ಜನ ಹಸಿವಿನಿಂದ ಬಳಲದಂತೆ ನೋಡಿಕೊಂಡಿದ್ದಾರೆ. ಇವರ ವಿಧಾನಸಭಾ ಕ್ಷೇತ್ರದಲ್ಲಿ 7 ಬಿಬಿಎಂಪಿ ವಾರ್ಡ್‌ಗಳು ಬರುತ್ವೆ.

ಕೊರೋನಾ ಕಥೆ, MLC ಟಿ.ಎ. ಶರವಣ ಜೊತೆ

ಪುಲಕೇಶಿ ನಗರದ ಏಳೂ ವಾರ್ಡ್‌ಗಳ ಸದಸ್ಯರ ಜತೆ ಸಮಾಲೋಚನೆ ನಡೆಸಿ ಮಿಂಚಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಖಂಡ ಪ್ರೀತಿಗೆ ಕ್ಷೇತ್ರದ  ಜನರು ಜೈ ಹೋ ಎಂದಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.