'ಹುಬ್ಬಳ್ಳಿ ಟ್ರೈನ್‌ಗೆ ಹೇಮಂತ್ ಬರ್ತಾರೆ, ಕಾಯ್ಬೇಕು ಅಂತ ಕಾರಿನಿಂದ ಇಳಿದು ಹೋಗಿದ್ರು'

Dec 29, 2020, 10:37 AM IST

ವಿಧಾನ ಪರಿಷತ್ ಉಪಸಭಾಪತಿ ಎಸ್‌ ಎಲ್ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ, ರಾಜಕೀಯ ನಾಯಕರಿಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ. 

ಧರ್ಮೇಗೌಡರನ್ನು ಕರೆದುಕೊಂಡ ಹೋಗಿದ್ದ ಡ್ರೈವರ್ ಮಾತನಾಡಿದ್ದಾರೆ. ನಿನ್ನೆ ಸಂಜೆ 4.30 ರ ಸುಮಾರಿಗೆ ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದಿದ್ದೆ. ನಾನು ಖಾಸಗಿಯಾಗಿ ಮಾತನಾಡಬೇಕು ಎಂದು ಕಾರಿನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮಾತನಾಡುತ್ತಿದ್ದರು.  7.30 ರವರೆಗೆ ಕಾದೆ. ಇನ್ನು ಬರಲಿಲ್ವಲ್ಲ ಅಂತ ಕರೆ ಮಾಡಿದರೆ ಸ್ವಿಚ್ ಆಫ್ ಬಂದಿದೆ. ನಂತರ ಹುಡುಕಾಡಿದ್ದೇವೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ' ಎಂದು ಧರ್ಮರಾಜ್ ಹೇಳಿದ್ದಾರೆ. 

ವಿಧಾನ ಪರಿಷತ್ ಗಲಾಟೆ ನಂತರ ಮಾತಾಡಿ ಸಮಾಧಾನ ಮಾಡಿದ್ದೆ, ಧೈರ್ಯವಾಗಿಯೇ ಇದ್ರು: ಸಿಟಿ ರವಿ 

 

'