ಅಪೋಲೋ ಆಸ್ಪತ್ರೆಯವರು ಫೀಸ್ ತೆಗೆದುಕೊಳ್ಳದೇ ಸಹಕರಿಸಿದ್ದಾರೆ: ನೀನಾಸಂ ಸತೀಶ್

Jun 15, 2021, 1:44 PM IST

ಬೆಂಗಳೂರು (ಜೂ. 15): ವಿಜಯ್ ಅಂತ್ಯಕ್ರಿಯೆ ಬಗ್ಗೆ ನಟ ನೀನಾಸಂ ಸತೀಶ್ ಮಾತನಾಡಿದ್ದಾರೆ. 'ಅಪೋಲೋ ಆಸ್ಪತ್ರೆಯವರು ನಮಗೆ ತುಂಬಾ ಸಪೋರ್ಟ್ ಮಾಡಿದಾರೆ. ಒಂದು ರೂಪಾಯಿ ಫೀಸ್ ತೆಗೆದುಕೊಳ್ಳದೇ, ಸಾಧ್ಯವಾದಷ್ಟು ಪ್ರಯತ್ನಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಸರ್ಕಾರಿ ಗೌರವದೊಂದಿಗೆ ವಿಜಯ್ ಅಂತ್ಯಕ್ರಿಯೆ: ಸಿಎಂ ಬಿಎಸ್‌ವೈ

ಕಡೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕೊಡಲಾಗುತ್ತದೆ. ಅಭಿಮಾನಿಗಳು ಕೊರೋನಾ ನಿಯಮಗಳನ್ನು ಪಾಲಿಸಿ. ನೂಕುನುಗ್ಗಲು ಮಾಡಬೇಡಿ' ಎಂದಿದ್ದಾರೆ. ನಟ ವಿಜಯ್‌ ಅವರ ಪಾರ್ಥೀವ ಶರೀರವನ್ನು ಹುಟ್ಟೂರು ಪಂಚನಹಳ್ಳಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಪಂಚನಹಳ್ಳಿಯಲ್ಲಿ ಕೆಲಕಾಲ ಸಾರ್ವಜನಿಕ ದರ್ಶನಕ್ಕಿಟ್ಟು ಬಳಿಕ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ವಿಧಿವಿಧಾನದಂತೆ ಅಂತಿಮ ಸಂಸ್ಕಾರ ನಡೆಯಲಿದೆ.