Suvarna Special: ಮುಡಾ ಕೇಸಲ್ಲಿ ಮುಳುಗುತ್ತಿದ್ದ ಸಿಎಂ ಸಿದ್ದುಗೆ ಸಿಕ್ಕಿತು ಶತ್ರು ಬಲ..!

Oct 4, 2024, 6:11 PM IST

ಅವರಿಬ್ಬರೂ ದೋಸ್ತಿಗಳೂ ಹೌದು, ದುಷ್ಮನ್‌ಗಳೂ ಹೌದು.. ಒಮ್ಮೆ ಸ್ನೇಹ, ಮತ್ತೊಮ್ಮೆ ಯುದ್ಧ.. ಸ್ನೇಹ.. ಸಂಘರ್ಷ.. ದುಷ್ಮನಿ, ಹಳೇ ಗೆಳೆಯರ ಜುಗಲ್ಬಂದಿ..! ಚಾಮುಂಡೇಶ್ವರಿ ಸನ್ನಿಧಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಿಕ್ಕ ‘ಶತ್ರು’ ಬಲ ಎಂಥದ್ದು..? ದಸರಾ ವೇದಿಕೆಯಲ್ಲೇ ದಳಪತಿಗೆ ಟಕ್ಕರ್ ಕೊಟ್ಟ ಜೆಡಿಎಸ್ ಶಾಸಕ, ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದೇಕೆ.? ಸಿದ್ದು ರಾಜೀನಾಮೆ ಕೇಳಿದ್ದಕ್ಕೆ ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರಾ ಅಂತ ಅಬ್ಬರಿಸಿದ್ದೇಕೆ ದಳ ಪಾಳೆಯದ ಶಾಸಕ.? ಸತ್ಯಮೇವ ಜಯತೇ.. ಜೈ ಚಾಮುಂಡಿ..? ಸಿದ್ದು ರಣಘೋಷಣದ ಅಸಲಿ ಗುಟ್ಟೇನು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸಿದ್ದುಗೆ ಶತ್ರು ಬಲ..!

ಜೆಡಿಎಸ್ ಶಾಸಕ ಜಿಟಿ ದೇವೇಗೌಡ್ರು ದಸರಾ ವೇದಿಕೆಯಲ್ಲೇ   ಸಿಎಂ ಸಿದ್ದರಾಮಯ್ಯರನ್ನು ಹೊಗಳಿ, ದಳಪತಿ ಕುಮಾರಸ್ವಾಮಿಯವರನ್ನು ತೆಗಳಿದ್ದಾರೆ. ಇಡೀ ಪ್ರತಿಪಕ್ಷಗಳ ಪಾಳೆಯ ಸಿದ್ದರಾಮಯ್ಯನವರ ರಾಜೀನಾಮೆಗೆ ಪಟ್ಟು ಹಿಡಿದು ಕೂತಿದೆ. ಆದ್ರೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ್ರು, ಸಿಎಂ ಯಾಕೆ ರಾಜೀನಾಮೆ ಕೊಡ್ಬೇಕು ಅಂತ ಪ್ರಶ್ನಿಸಿದ್ದಾರೆ. ದಸರಾ ವೇದಿಕೆಯಲ್ಲೇ   ಸಿದ್ದರಾಮಯ್ಯರನ್ನು ಹೊಗಳಿ, ದಳಪತಿ ಕುಮಾರಸ್ವಾಮಿಯವರನ್ನು ತೆಗಳಿದ್ದಾರೆ.ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶತ್ರು ಬಲ ಸಿಕ್ಕಿದೆ. ಆ ಬಲ ಸಿಕ್ಕಿದ್ದೇ ತಡ, ಸಿದ್ದರಾಮಯ್ಯನವರ ಚಹರೆಯೇ ಬದಲಾಗಿ ಹೋಗಿದೆ. ಶತ್ರುಬಲ ಸಿಗುತ್ತಿದ್ದಂತೆ, ಸಿದ್ದರಾಮಯ್ಯ ಅದೊಂದು ಮಾತು ಹೇಳಿ ರಾಜಕೀಯ ವೈರಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ.