ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರ ಇಲ್ಲ, ವಕೀಲ ಸಿವಿ ನಾಗೇಶ್ ವಾದ!

Oct 5, 2024, 11:23 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪಾತ್ರ ಇಲ್ಲ ಎಂದು ವಕೀಲ ಸಿವಿ ನಾಗೇಶ್ ವಾದಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯಲ್ಲಿ ನಾಗೇಶ್, ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿರುವ ತಪ್ಪುಗಳನ್ನು ಕೋರ್ಟ್ ಮುಂದೆ ಎತ್ತಿ ತೋರಿಸಿದ್ದಾರೆ. ಈ ಪ್ರಕರಣದಲ್ಲಿ ನಟ ದರ್ಶನ್ ಸಿಲುಕಿಸುವ ಒಳ ಸಂಚು ನಡೆದಿದೆ ಎಂದು ವಾದಿಸಿದ್ದಾರೆ. ಕೆಲ ಸಾಕ್ಷ್ಯಗಳನ್ನು ಪೊಲೀಸರು ಸೃಷ್ಟಿ ಮಾಡಿದ್ದಾರೆ ಎಂದಿದ್ದಾರೆ. ಸಿವಿ ನಾಗೇಶ್ ಕೋರ್ಟ್‌ನಲ್ಲಿ ಜಾಮೀನಿಗಾಗಿ ವಾದಿಸಿದ ಪ್ರಮುಖ ಅಂಶಗಳೇನು?