ಉಕ್ಕಿ ಹರಿಯುತ್ತಿದ್ದಾಳೆ ತುಂಗೆ; ಶೃಂಗೇರಿಯ ಕಪ್ಪೆ ಶಂಕರ ದೇವಾಲಯ ಮುಳುಗಡೆ

Aug 8, 2020, 3:58 PM IST

ಚಿಕ್ಕಮಗಳೂರು (ಆ. 08): ಮಲೆನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಶೃಂಗೇರಿ ದೇವಸ್ಥಾನದ ಸ್ನಾನಘಟ್ಟ ಮುಳುಗಡೆಯಾಗಿದೆ. ಕಪ್ಪೆ ಶಂಕರ ದೇವಾಲಯ ಕೂಡಾ ಮುಳುಗಡೆಯಾಗಿದೆ. ತುಂಗಾ ಭದ್ರಾ ನದಿ ತುಂಬಿ ಹರಿಯುತ್ತಿವೆ. ಸಮೀಪದಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.  ವಾಹನ ನಿಲುಗಡೆ ಮಾಡುವುದು ಕಷ್ಟವಾಗಿದೆ. ಜನರಿಗೂ ಕೂಡಾ ಒಂದು ಕಡೆಯಿಂದ ಮತ್ತೊಂದು ಕಡೆ ಬರುವುದು ಕಷ್ಟವಾಗಿದೆ. ಎಲ್ಲರೂ ಅವರವರು ಇರುವ ಸ್ಥಳಗಳಲ್ಲೇ ಇರಬೇಕಾಗಿದೆ. ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ. 

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ, ಜಮೀನುಗಳಿಗೆ ನುಗ್ಗಿದ ನೀರು