KSRTC ಅಧಿಕಾರಿಗಳು- ಸಿಬ್ಬಂದಿಗಳ ನಡುವೆಯೇ ಗಲಾಟೆ!

May 20, 2020, 4:29 PM IST

ಬೆಂಗಳೂರು(ಮೇ.20): KSRTC ಬಸ್ ಸಂಚಾರ ಮೇ. 19 ರಿಂದ ಆರಂಭವಾಗಿದೆ. ಆದರೆ ಬಸ್ ನಿಲ್ದಾಣದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಬಯಲಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಡುವೆಯೇ ಗೊಂದಲ ಆರಂಭವಾಗಿದೆ.

ಸರತಿ ಪ್ರಕಾರ ಬಸ್ ಲೋಡ್ ಮಾಡಿಲ್ಲ ಎಂದು ಅಧಿಕಾರಿಗಳಿಗೆ ಕೆಎಸ್‌ಆರ್‌ಟಿಸಿ ಡ್ರೈವರ್ ಹಾಗೂ ಕಂಡಕ್ಟರ್‌ಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನೆ ಬಂದಿರುವ ಬಸ್‌ಗಳು ಹಾಗೆ ನಿಂತಿವೆ. ಈಗ ಬಂದಿರುವ ಬಸ್‌ಗಳಿಗೆ ಜನರನ್ನು ತುಂಬಿ ಕಳಿಸುತ್ತಿದ್ದೀರ. ಹೀಗಾದರೆ ನಾವೇನು ಮಾಡಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಠಾತ್‌ ಪ್ರತಿಭಟನೆ: ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಕಾಂಗ್ರೆಸ್

ರಾತ್ರಿ ಊಟವಿಲ್ಲ, ನಿದ್ರೆಯಿಲ್ಲ. ನಮ್ಮನ್ನು ವಾಪಾಸ್ ಊರಿಗೆ ಕಳಿಸಿ ಎಂದು ಅಧಿಕಾರಿಗಳ ವಿರುದ್ಧ ಸಿಬ್ಬಂದಿ ಗಲಾಟೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.