ಬಾರದ ಕುಟುಂಬಸ್ಥರು; ತಾವೇ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದ ಸಾರ್ವಜನಿಕರು

Jul 6, 2020, 1:10 PM IST

ಬೆಂಗಳೂರು (ಜು. 06): ಶವಸಂಸ್ಕಾರಕ್ಕೂ ತಟ್ಟಿದೆ ಕೊರೊನಾ ಬಿಸಿ..!ಸೋಂಕಿಲ್ಲದ ವ್ಯಕ್ತಿಯ ಅಂತ್ಯಕ್ರಿಯೆಗೂ ಕುಟುಂಬಸ್ಥರು ಆಗಮಿಸಿಲ್ಲ. ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ಸಾರ್ವಜನಿಕರೇ ಅಂತ್ಯಕ್ರಿಯೆ ಮಾಡಿದ್ದಾರೆ. ಮಡಿಕೇರಿಯಲ್ಲಿ ಇಂತಹದ್ದೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಅನಾರೋಗ್ಯದಿಂದ ಗೋಪಾಲಪುರ ನಿವಾಸಿ ಮೃತಪಟ್ಟಿದ್ದಾರೆ.

ಕೊರೋನಾ ಕಾಟ: ಬೆಂಗಳೂರಿಗರ ಜೀವದ ಜೊತೆ ಆಟ ಆಡ್ತಿದ್ಯಾ ಆಸ್ಪತ್ರೆಗಳು..? 

ಇವರಿಗೆ ಕೊರೊನಾ ಇರಲಿಲ್ಲ. ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೂ ಅಂತ್ಯಕ್ರಿಯೆಗೆ ಕುಟುಂಬಸ್ಥರು ಆಗಮಿಸಿರಲಿಲ್ಲ. ಕೊನೆಗೆ ಸಾರ್ವಜನಿಕರೇ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.