ಉಡುಪಿ: ಹುಟ್ಟೂರನ್ನು ಕೊರೋನಾ ಮುಕ್ತಗೊಳಿಸಲು ಮಣೆಗಾರ್ ಮಿರಾನ್ ಸಾಹೇಬ್ ನೆರವು

Jun 2, 2021, 4:03 PM IST

ಉಡುಪಿ (ಜೂ. 02): ಹಳ್ಳಿಹಳ್ಳಿಗೂ ಕೊರೋನಾ ಸೋಂಕು ಹರಡಿದ್ದು, ಜನಜೀವನ ಕಷ್ಟದಲ್ಲಿ ಸಿಲುಕಿದೆ. ಕೊರೋನಾದಿಂದ ಮನೆಮಂದಿಯನ್ನು, ಉದ್ಯೋಗವನ್ನು, ಹಣವನ್ನು ಕಳೆದುಕೊಂಡು ಅದೆಷ್ಟೋ ಮಂದಿ ಸಂಕಷ್ಟದಲ್ಲಿದ್ಧಾರೆ.

ಬಳ್ಳಾರಿ ನೆರವಿಗೆ ಧಾವಿಸಿದ ಸೋನು ಸೂದ್, ರೈಲ್ವೇ ನಿಲ್ದಾಣದಲ್ಲೇ ಅಕ್ಸಿಜನ್

ಉಡುಪಿಯ ಶಿರೂರು ಮೂಲದ ಉದ್ಯಮಿ ಮಣೆಗಾರ್ ಮಿರಾನ್ ಸಾಹೇಬ್  ತಮ್ಮ ಊರು ಶಿರೂರನ್ನು ಕೊರೋನಾ ಮುಕ್ತ ಮಾಡಲು 1 ಕೋಟಿ ರೂ ಸಹಾಯ ಮಾಡಿದ್ದಾರೆ. ಆಕ್ಸಿಜನ್ ಕಾನ್ಸ್‌ಟ್ರೇಟರ್, ಆಂಬುಲೆನ್ಸ್, ಫುಡ್‌ಕಿಟ್ ನೆರವು ನೀಡಿದ್ದಾರೆ. ಊರಿನ ಯುವಕರ ತಂಡವನ್ನು ಕಟ್ಟಿ, ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಇವರ ಸಮಾಜ ಸೇವೆಗೆ ನಮ್ಮದೊಂದು ಸಲಾಂ...!