ಕಳ್ಳತನ ಮಾಡಿದ ಮಾಂಗಲ್ಯ ಸರ ವಾಪಸ್; ಬೈಕ್‌ ಮೇಲೆ ಹಸು ಕೂರಿಸಿಕೊಂಡು ಹೋದ ಭೂಪ!

Sep 20, 2020, 9:29 AM IST

ಬೆಂಗಳೂರು (ಸೆ. 20): ಸರಗಳ್ಳತನದ ಪ್ರಕರಣವನ್ನು ದಿನಾ ಬೆಳಗಾದ್ರೆ ಕೇಳುತ್ತಿರುತ್ತೇವೆ. ಆದರೆ ಇದೊಂದು ಅಪರೂಪ ಪ್ರಕರಣ. ಸರಗಳ್ಳತನ ಮಾಡಿದ ವ್ಯಕ್ತಿಗೆ ಪಶ್ಚಾತ್ತಾಪ ಕಾಡಿ, ಕೊನೆಗೆ ಮಾಂಗಲ್ಯ ಸರವನ್ನು ಸುವರ್ಣ ನ್ಯೂಸ್‌ಗೆ ಕಳುಹಿಸಿ ವಾರಸ್ತಾರರಿಗೆ ತಲುಪಿಸುವಂತೆ ಕೇಳಿಕೊಂಡಿರುವ ಅಪರೂಪದ ಪ್ರಸಂಗ ನಡೆದಿದೆ.  ಏನಿದು ಸ್ಟೋರಿ? ನೋಡೋಣ ಬನ್ನಿ..!

ಬೈಕ್‌ನಲ್ಲಿ ಇನ್ನೊಬ್ಬರನ್ನು ಕೂರಿಸಿಕೊಂಡು ಹೋಗುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮನುಷ್ಯ ಬೈಕ್‌ನಲ್ಲಿ ಹಸುವನ್ನು ಕೂರಿಸಿಕೊಂಡು ಹೋಗಿದ್ದಾನೆ. ಇದನ್ನು ನೋಡಿದ ಜನ ಮಾತ್ರ ದಂಗಾಗಿ ಹೋದ್ರು..!

ಆಫೀಸ್‌ಗೆ ಹೋಗಿದ್ದ ತಂದೆ ಮನೆಗೆ ಬಂದ್ರು ಅಂತ ಖುಷಿಯಲ್ಲಿ ಮಗಳು ಗೇಟ್ ತೆರೆಯಲು ಹೋದಳು. ಆದರೆ ಅಲ್ಲಿ ಆಗಿದ್ದೇ ಬೇರೆ. ಗೇಟ್ ಹಿಂದೆ ಇದ್ದ ಮಗಳನ್ನು ತಂದೆಯೇ ಕಾರಿನಿಂದ ಗುದ್ದಿದ್ದಾನೆ. ಅರೇ ಏನಿದು ವಿಚಿತ್ರ ಅಂತೀರಾ? ಹೌದು ಕಣ್ರಿ..! ಈ ಸುದ್ದಿ ನೋಡಿದ್ರೆ ನಿಮಗೆ ಅರ್ಥವಾಗುತ್ತೆ! ಇವೆಲ್ಲವನ್ನೂ ನೋಡೋಣ ಬನ್ನಿ..!