ನಿಯಮ ಮೀರಿ 'ಕೈ' ನಾಯಕನ ಬರ್ತಡೇ ಪಾರ್ಟಿ; ಬೇಜವಾಬ್ದಾರಿ ವರ್ತನೆಗೆ ಆಕ್ರೋಶ

Jul 5, 2020, 5:34 PM IST

ಬೆಂಗಳೂರು (ಜು. 05): ಲಾಕ್‌ಡೌನ್ ನಡುವೆಯೇ ಹೆಬ್ಬಗೋಡಿಯಲ್ಲಿ ಕೈ ನಾಯಕರೊಬ್ಬರು ಭರ್ಜರಿ ಪಾರ್ಟಿ ಮಾಡಿದ್ದಾರೆ. ಜಿಗಣಿಯ ಕಾಂಗ್ರೆಸ್ ನಾಯಕ ರಾಜಗೋಪಾಲ್ ರೆಡ್ಡಿ ಬರ್ತಡೇ ಪಾರ್ಟಿ ಆಚರಿಸಿಕೊಂಡಿದ್ದಾರೆ. ಪೊಲೀಸರು ಅನುಮತಿಯನ್ನೂ ತೆಗೆದುಕೊಂಡಿಲ್ಲ. ಇದೀಗ ಕೈ ನಾಯಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಉದ್ದುದ್ದ ಭಾಷಣ ಮಾಡೋ ಸಚಿವ ಸಿಟಿ ರವಿ, ಕುಮಾರಸ್ವಾಮಿಯಿಂದ ರೂಲ್ಸ್ ಬ್ರೇಕ್..!

ಜನ ಪ್ರತಿನಿಧಿಗಳಾಗಿ ಜವಾಬ್ದಾರಿಯುತವಾಗಿ ವರ್ತಿಸಬೇಕಾದವರು ಈ ರೀತಿ ಬೇಜವಾಬ್ದಾರಿಯುತವಾಗಿ ವರ್ತಿಸುವುದು ಸರಿಯಲ್ಲ. ಸರ್ಕಾರದ ನೀತಿ ನಿಯಮಗಳನ್ನು ಜನ ಪ್ರತಿನಿಧಿಗಳೇ ಪಾಲಿಸದಿದ್ದರೆ ಜನತೆಗೆ ತಪ್ಪು ಸಂದೇಶ ಕೊಟ್ಟಂತಾಗುತ್ತದೆ.