ಮೈಸೂರು ದಸರಾ ಉದ್ಘಾಟನೆಗೆ ಎಸ್‌ಎಂಕೆಗೆ ಸಿಎಂ ಆಹ್ವಾನ

Oct 2, 2021, 4:57 PM IST

ಬೆಂಗಳೂರು (ಅ. 02): ಎಸ್ಎಂಕೆ ನಿವಾಸಕ್ಕೆ ಸಿಎಂ ಬೊಮ್ಮಾಯಿ ತೆರಳಿ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ಸಿಎಂಗೆ  ಪ್ರತಾಪ್ ಸಿಂಹ, ಎಸ್ ಟಿ ಸೋಮಶೇಖರ್ ಸಾಥ್ ನೀಡಿದ್ದಾರೆ. 

ಎಲ್ಲಾ ದಾಖಲೆ ಇದ್ರೂ ವಿದ್ಯುತ್ ಕನೆಕ್ಷನ್ ಇಲ್ಲ, ಅಧಿಕಾರಿಗಳಿಗೆ ಇಂಧನ ಸಚಿವರ ವಾರ್ನಿಂಗ್

ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿಯೂ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ದಸರಾ ಕಾರ್ಯಕ್ರಮಗಳು ವರ್ಚುವಲ್‌ ಆಗಿ ಪ್ರಸಾರವಾಗಲಿದೆ. ದಸರಾ ವೆಬ್‌ಸೈಟ್‌, ಯೂಟ್ಯೂಬ್, ಫೇಸ್‌ಬುಕ್‌ನಲ್ಲಿ ದಸರಾ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಂಬೂಸವಾರಿ ನೇರಪ್ರಸಾರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದ್ದಾರೆ.