ರಾಜ್ಯದಲ್ಲಿ ಚರ್ಚ್‌ಗಳ ಸಮೀಕ್ಷೆಗೆ ಸಿಎಂ ಬೊಮ್ಮಾಯಿ ಸೂಚನೆ: ಕ್ರೈಸ್ತ ಸಮುದಾಯದಿಂದ ಆಕ್ರೋಶ

Oct 19, 2021, 10:17 AM IST

ಚಿತ್ರದುರ್ಗ (ಅ. 19): ರಾಜ್ಯದಲ್ಲಿ ಚರ್ಚ್‌ಗಳ ಸಮೀಕ್ಷೆಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ಧಾರೆ. ಸರ್ಕಾರದ ಕ್ರಮಕ್ಕೆ ಕ್ರೈಸ್ತ ಸಮುದಾಯದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಲೋಕ್ ಕುಮಾರ್‌ಗೆ ತಪ್ಪದ ಕಂಟಕ, ಫೋನ್ ಕದ್ದಾಲಿಕೆ ಮರು ತನಿಖೆ

ಅನಧಿಕೃತ ಚರ್ಚ್, ಅಧಿಕೃತ ಚರ್ಚ್ ಎಂದು ಸಮೀಕ್ಷೆ ಮಾಡುವುದು, ಪಟ್ಟಿ ತಯಾರಿಸುವುದು ಸರಿಯಲ್ಲ. ಅನಗತ್ಯ ಪ್ರಚೋದನೆ ಕೊಟ್ಟಂತಾಗುವುದು. ಹಾಗಾಗಿ ಈ ಸಮೀಕ್ಷೆಯನ್ನು  ಕೈ ಬಿಡುವಂತೆ ಒತ್ತಾಯಿಸುತ್ತೇವೆ. ಇನ್ನು ಮತಾಂತರ ಕಂಡು ಬಂದರೆ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿ' ಎಂದು ಪೀಟರ್ ಮಚಾಡೋ ಹೇಳಿದ್ಧಾರೆ.