ಸದನದಲ್ಲಿಂದು ಸೀಡಿ ಕಂಪನ, ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್‌ಗೆ ಕಾಂಗ್ರೆಸ್‌ ಬಿಗಿಪಟ್ಟು

Mar 23, 2021, 9:20 AM IST

ಬೆಂಗಳೂರು (ಮಾ. 23): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಕೇಸ್ ವಿಚಾರ ಇಂದೂ ಕೂಡಾ ಸದನದಲ್ಲಿ ಸದ್ದು ಮಾಡಲಿದೆ. ನಿನ್ನೆ ವಿಷಯ ಪ್ರಸ್ತಾಪಿಸಿ, ಧರಣಿ ಮಾಡಿದ್ದ ಕಾಂಗ್ರೆಸ್, ಇಂದು ಕೂಡಾ ಸಮರ ಮುಂದುವರೆಸಲಿದೆ.

ಸೀಡಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು. ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ 6 ಮಂದಿ ಸಚಿವರು ರಾಜಿನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. 

Exclusive : ಬೆಂಗಳೂರು to ಗೋವಾ, ಸೀಡಿ ಯುವತಿಯ ಇಂಚಿಂಚು ಮಾಹಿತಿ ಬಹಿರಂಗ!