ಯಶವಂತಪುರದಲ್ಲಿ ರಸ್ತೆಯಲ್ಲೆ ಅಡುಗೆ ಮಾಡಿ ಸಾರಿಗೆ ನೌಕರರ ವಿಶಿಷ್ಟ ಪ್ರತಿಭಟನೆ

Dec 11, 2020, 11:57 AM IST

ಬೆಂಗಳೂರು (ಡಿ. 11): ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ, ಸಾರಿಗೆ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. ಯಶವಂತಪುರದಲ್ಲಿ ನೌಕರರು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಅಲ್ಲಿ ಅಡುಗೆ ಮಾಡುತ್ತಲೇ ಮುಷ್ಕರಕ್ಕೆ ಮುಂದಾಗಿದ್ಧಾರೆ. 

'ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ: ಕಲ್ಬುರ್ಗಿ ನೌಕರರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ರಾಜ್ಯದ ಹಲವೆಡೆ ಬಸ್ ಸಂಚಾರ ಸ್ತಬ್ಧವಾಗಿದೆ.