ವಿಧಾನ ಪರಿಷತ್ ಗಲಾಟೆ ನಂತ್ರ ಮಾತಾಡಿ ಸಮಾಧಾನ ಮಾಡಿದ್ದೆ, ಧೈರ್ಯವಾಗಿಯೇ ಇದ್ರು: ಸಿಟಿ ರವಿ

Dec 29, 2020, 10:10 AM IST

ಬೆಂಗಳೂರು (ಡಿ. 29):  ವಿಧಾನ ಪರಿಷತ್ ಉಪಸಭಾಪತಿ ಎಸ್‌ ಎಲ್ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ, ರಾಜಕೀಯ ನಾಯಕರಿಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ. 

ಸಚಿವ ಸಿಟಿ ರವಿ ಸಂತಾಪ ಸೂಚಿಸಿದ್ದಾರೆ. 'ವಿಧಾನಪರಿಷತ್ ಘಟನೆ ನಡೆದಾಗ ನಾನು ತಮಿಳುನಾಡಿನಲ್ಲಿದ್ದೆ. ಕರೆ ಮಾಡಿ ಮಾತನಾಡಿದ್ದೆ. ಇರ್ಲಿ ಬಿಡಿ ಬ್ರದರ್, ಬೇಸರ ಏನಿಲ್ಲ ಅಂದಿದ್ರು. ಯಾವ ಬೇಸರವನ್ನೂ ತೋರಿಸಿಕೊಂಡಿರಲಿಲ್ಲ. ಆ ಘಟನೆಯನ್ನು ಯಾಕೆ ಮನಸ್ಸಿಗೆ ಹಚ್ಚಿಕೊಂಡಿದ್ರು ಅಂತ ಗೊತ್ತಾಗ್ತಾ ಇಲ್ಲ' ಎಂದಿದ್ಧಾರೆ. 

'ಧರ್ಮೇಗೌಡ್ರು ಬಹಳ ಧೈರ್ಯವಂತರು, ಈ ದುರಂತವನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ'