ಕಷ್ಟಕ್ಕಾಗುವ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

May 19, 2020, 12:07 PM IST

ಹಸಿವು ನೀಗಿಸುವುದು ಪುಣ್ಯದ ಕಾರ್ಯ ಎನ್ನುತ್ತಾರೆ. ಇಂಥ ಕೊರೋನಾ ವೈರಸ್ ಎಂಬೊಂದು ಮಹಾಮಹಾರಿ ವಿಶ್ವವನ್ನೇ ಅಲುಗಾಡಿಸುತ್ತಿರುವಾಗ, ಭಾರತ ಅನಿವಾರ್ಯವಾಗಿ ಲಾಕ್‌ಡೌನ್ ಘೋಷಿಸಿತು. ಕೆಲಸವಿಲ್ಲದೇ, ಕೈಯಲ್ಲಿ ದುಡ್ಡಿಲ್ಲದೇ ಬಡವರು, ನಿರ್ಗತಿಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೆ, ಬಿಜೆಪಿ ಹಿರಿಯ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಂಥ ಕೊಡುಗೈ ದಾನಿಗಳಿಂದ ಅದೆಷ್ಟೋ ಬಡವರು ಹೊಟ್ಟೆ ತುಂಬಾ ಉಂಡು ಮಲಗುವಂತಾಯಿತು. ಕಟ್ಟಾ ಅವರಂಥವರು ಜನರಿಗೆ ಸಹಕರಿಸಿದ್ದು ಹೇಗೆ?