ಬಿಗ್ 3 ಫಲಶ್ರುತಿ, ಯಾದಗಿರಿ ನೀರಿನ ಸಮಸ್ಯೆ ನಿವಾರಿಸಲು 2 ಸಾವಿರ ಕೋಟಿ ರೂ ಮಂಜೂರು!

Jul 5, 2022, 8:51 PM IST

ಯಾದಿಗಿರಿ ಜಿಲ್ಲೆಯ ನಂದಿ ಹಳ್ಳಿಯ ನೀರಿನ ಸಮಸ್ಯೆ ಕುರಿತು ಏಷ್ಯಾನೆಟನ್ ಸುವರ್ಣನ್ಯೂಸ್ ಬಿಗ್ 3 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಯಾದಗಿರಿಯಲ್ಲಿ ಕುಡಿಯುವ ನೀರಿಲ್ಲದ ಮಕ್ಕಳು ಪಾಡು ಹೇಳತೀರದು.  ಕುಡಿಯುವ ನೀರಿಲ್ಲದ ಗ್ರಾಮಸ್ಥರು ಕಂಗಾಲಾಗಿದ್ದಲ್ಲದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಬಿಗ್ 3 ವರದಿ ಸರ್ಕಾರದ ಗಮನ ಸೆಳೆಯಿತು. ಇದರ ಪರಿಣಾಮ ಇಡೀ ಯಾದಗಿರಿ ಜಿಲ್ಲೆಯ ನೀರಿನ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರ 2054 ಕೋಟಿ ರೂಪಾಯಿ ಮಂಜೂರಾಗಿದೆ.