ಪತ್ರಕರ್ತರಿಗೆ ಉಚಿತ ವ್ಯಾಕ್ಸಿನ್ ಅಭಿಯಾನ; ಬೀದರ್‌ನಲ್ಲಿ ಪ್ರಭು ಚೌಹಾಣ್ ಚಾಲನೆ

May 12, 2021, 9:38 AM IST

ಬೆಂಗಳೂರು (ಮೇ. 12): ಪತ್ರಕರ್ತರು ಫ್ರಂಟ್‌ಲೈನ್ ವರ್ಕರ್ಸ್ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಘೋಷಿಸಿದ ಬೆನ್ನಲ್ಲೇ ಬೀದರ್‌ನಲ್ಲಿ ಪತ್ರಕರ್ತರಿಗೆ ಉಚಿತ ಲಸಿಕೆ ಅಭಿಯಾನ ಶುರುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್, ಲಸಿಕೆ ಪಡೆಯುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.  'ಪತ್ರಕರ್ತರು ತಮ್ಮ ಆರೋಗ್ಯಕ್ಕಾಗಿ, ಕುಟುಂಬದವರ ಆರೋಗ್ಯಕ್ಕಾಗಿ ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ.