ಕೊಡಗು ಸಾಯಿ ಶಂಕರ ಶಾಲೆಯಲ್ಲಿ ಮಕ್ಕಳಿಗೆ ಶಸ್ತ್ರಾಸ್ತ ತರಬೇತಿ, ಭಜರಂಗದಳದಿಂದ ಆತಂಕದ ನಡೆ

May 16, 2022, 3:38 PM IST

ಕೊಡಗು (ಮೇ. 16): ಸಾಯಿ ಶಂಕರ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ (Weapon Training) ನೀಡಿದೆ ಭಜರಂಗದಳ. ಶೌರ್ಯ ಪ್ರಶಿಕ್ಷಣ ವರ್ಗ' ಹೆಸರಿನಲ್ಲಿ ಶಾಲಾ ಆವರಣದಲ್ಲಿ, ಮೇ 5 ರಿಂದ ಮೇ 11 ರವರೆಗೆ ಮಕ್ಕಳಿಗೆ ತ್ರಿಶೂಲ ದೀಕ್ಷೆ ನೀಡಿದೆ. 

ನೂರಾರು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ. ಮಕ್ಕಳು ಬಂದೂಕು, ತ್ರಿಶೂಲ ಹಿಡಿದಿರುವ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ಶಿಕ್ಷಣ ಸಚಿವ ನಾಗೇಶ್‌ಗೆ ಎಸ್‌ಡಿಪಿಐ ಟ್ಯಾಗ್ ಮಾಡಿದೆ. ಈ ತರಬೇತಿ ಬಗ್ಗೆ ವಿಎಚ್‌ಪಿ ಹಾಗೂ ಮುಸ್ಲಿ ಮುಖಂಡರಿಂದ ಚರ್ಚೆ ನಡೆದಿದೆ.