ಆಂಬ್ಯುಲೆನ್ಸ್ ಅರೆಂಜ್ ಆಗಿದೆ, ಬೆಂಗ್ಳೂರು ಬಿಡ್ಬೇಡಿ: ಸಿಎಂ ಮನವಿ

Jul 6, 2020, 2:02 PM IST

ಬೆಂಗಳೂರು (ಜು. 06): ಕೋವಿಡ್ 19, ಲಾಕ್‌ಡೌನ್ ಭಯದಿಂದ ಜನರು ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಯಾರೂ ಬೆಂಗ್ಳೂರು ಬಿಟ್ಟು ಹೋಗ್ಬೇಡಿ. ಮಹಾ ಜನರೇ ನಾವು ಕೊರೊನಾ ಪಿಡುಗಿನ ಜೊತೆ ಬದುಕಬೇಕಿದೆ' ಎಂದು ಮನವಿ ಮಾಡಿಕೊಂಡಿದ್ದಾರೆ. 

ಬೆಂಗಳೂರಲ್ಲಿ ಕಳೆದೈದು ದಿನಗಳಲ್ಲಿ ಕೊರೋನಾಗೆ 50 ಜನ ಬಲಿ..!

ಆಂಬುಲೆನ್ಸ್ ಕೊರತೆಯಾಗದಂತೆ ವ್ಯವಸ್ಥೆಯಾಗಿದೆ. ಹೊಸದಾಗಿ 450 ಆಂಬುಲೆನ್ಸನ್ನು ವ್ಯವಸ್ಥೆ ಮಾಡಲಾಗಿದೆ. ಆರೋಗ್ಯದ ಬಗ್ಗೆ ಮುನ್ನಚ್ಚರಿಕೆಯನ್ನೂ ತೆಗೆದುಕೊಂಡಿದ್ದೇವೆ. ಯಾರೂ ಗಾಬರಿಯಾಗುವ ಅಗತ್ಯ ಇಲ್ಲ. ನಾವು ಈ ಪಿಡುಗಿನ ಜೊತೆಯೇ ಬದುಕಬೇಕಿದೆ. ಇದನ್ನು ಬಿಟ್ಟು ಬೇರೆ ಮಾರ್ಗವಿಲ್ಲ' ಎಂದು ಹೇಳಿದ್ದಾರೆ.