ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಗೋದು ಅಷ್ಟು ಕಷ್ಟನಾ..?

Aug 21, 2019, 4:41 PM IST

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕು ಎನ್ನುವುದು ಎಲ್ಲಾ ಕ್ರಿಕೆಟಿಗರ ಕನಸಾಗಿರುತ್ತದೆ. ಸಾಕಷ್ಟು ಬೆವರು ಹರಿಸಿದರೂ ಒಂದು ರಾಜ್ಯದಿಂದ ಒಬ್ಬರೋ-ಇಬ್ಬರೋ ಸ್ಥಾನ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಆದರೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯುವುದು ಈಗ ಸುಲಭದ ಮಾತಾಗಿ ಉಳಿದಿಲ್ಲ. ಹೀಗಾಗಿ ರಾಜ್ಯದ ಮೂವರು ಕ್ರಿಕೆಟಿಗರು ಇದೀಗ ಗುಳೆ ಹೊರಟಿದ್ದಾರೆ. ಇದರಲ್ಲಿ ದಾವಣಗೆರೆ ಎಕ್ಸ್’ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಕೂಡಾ ಇದ್ದಾರೆ ಎನ್ನುವುದು ಮಾತ್ರ ವಿಪರ್ಯಾಸ...