ಕುಟುಂಬಗಳಿಗೆ NOC ಕೊಡಿ, ಅರಣ್ಯಾಧಿಕಾರಿ ಕಚೇರಿ ಛಾವಣಿ ಏರಿದ ಗ್ರಾಪಂ ಉಪಾಧ್ಯಕ್ಷ!

Dec 4, 2019, 7:00 PM IST

ಶಿವಮೊಗ್ಗ(ಡಿ. 04) 220 ಕುಟುಂಬಗಳಿಗೆ ಎನ್ ಒಸಿ ನೀಡದ ಹೊರತು ತಾನು ಕೆಳಗೆ ಇಳಿಯುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ವಲಯ ಅರಣ್ಯ ಅಧಿಕಾರಿ ಕಚೇರಿ ಮೇಲೇರಿ ಪ್ರತಿಭಟನೆ ನಡೆಸಿದ್ದಾರೆ.

ವಾಸದ ಮನೆ ಹಕ್ಕುಪತ್ರಕ್ಕೆ ಎನ್ ಒಸಿ ಕೊಡಬೇಕೆಂದು ಒತ್ತಾಯಿಸಿ ಇಲಾಖೆ ಕಟ್ಟಡ ಏರಿ ಕುಳಿತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಹೊಸನಗರ ತಾಲೂಕು ನಗರ ವಲಯ ಅರಣ್ಯ ಇಲಾಖೆಯ ವಿರುದ್ಧ ಮೂಡುಗೊಪ್ಪದ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಶೆಟ್ಟಿ  ಮಾಡಿರುವ ವಿನೂತನ ಪ್ರತಿಭಟನೆ ವೈರಲ್ ಆಗಿದೆ.