ಮಲೆನಾಡಿನಲ್ಲಿ ನಿಧಿ ಗುಲ್ಲು, ಶಿವಮೊಗ್ಗದ ದೇವಸ್ಥಾನ ಧ್ವಂಸಗೊಳಿಸಿದ ಕೇರಳ ಮಾಂತ್ರಿಕರ ತಂಡ!

Jul 29, 2023, 7:36 PM IST

ಶಿವಮೊಗ್ಗ(ಜು.29) ಶಿವಮೊಗ್ಗದಲ್ಲಿ ನಿಧಿ ಆಸೆಗೆ 700 ವರ್ಷ ಇತಿಹಾಸಿರುವ ಚೆನ್ನೈಬೈರ ದೇವಸ್ಥಾನ ಧ್ವಂಸಗೊಳಿಸಲಾಗಿದೆ. ಗರ್ಭಗುಡಿಯಲ್ಲೇ ನಿಧಿಗಾಗಿ 25 ಅಡಿ ಗುಂಡಿ ತೋಡಿ ನಿಧಿಗಾಗಿ ಶೋಧ ಮಾಡಲಾಗಿದೆ. ಕೇರಳದಿಂದ ಆಗಮಿಸಿದ ಮಾಂತ್ರಿಕರ ತಂಡ ಹಾಗೂ ಕೆಲ ಸ್ಥಳೀಯ ದುಷ್ಕರ್ಮಿಗಳು ಇದಕ್ಕೆ ಸಾಥ್ ನೀಡಿದ್ದಾರೆ. ಸಂಪೂರ್ಣ ದೇಗುಲ ಧ್ವಂಸಗೊಂಡಿದೆ. ಇದೀಗ ಸ್ಥಳೀಯರು ಈ ಕುರಿತು ದೂರು ನೀಡಿದ್ದು, ಕೂಡಲೇ ದೇವಲಾಯ ಪುನರ್ ನಿರ್ಮಾಣ ಮಾಡಲು ಆಗ್ರಹಿಸಿದ್ದಾರೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಗಮನ ನೀಡಿಲ್ಲ.