ಸುವರ್ಣ ನ್ಯೂಸ್‌ನಲ್ಲಿ ಆತ್ಮದ ಜತೆ ಮಾತುಕತೆಯ ಲೈವ್

Jul 27, 2020, 12:17 PM IST

ಬೆಂಗಳೂರು(ಜು.27): ಸದಾ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಸುವರ್ಣ ನ್ಯೂಸ್ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಆತ್ಮಗಳ ಸತ್ಯಾಸತ್ಯತೆ ಹಾಗೂ ಆತ್ಮವನ್ನು ಮಾತನಾಡಿಸುವುದು ಹೇಗೆ ಎನ್ನುವುದರ ರಿಯಾಲಿಟಿ ಚೆಕ್ ನಡೆಸಿದೆ.

ಸುವರ್ಣ ನ್ಯೂಸ್ ಆತ್ಮದ ಜತೆ ಮಾತನಾಡುವ ಕುರಿತಂತೆ ಇಂತಹದ್ದೊಂದು ಭಯಾನಕ ರಿಯಾಲಿಟಿ ಚೆಕ್‌ಗೆ ಸಾಕ್ಷಿಯಾಗಿದೆ. ಸತ್ತವರ ಆತ್ಮದ ಜತೆಗೆ ಮಾತನಾಡುವುದು ಹೇಗೆ? ಎನ್ನುವುದರ ಕುರಿತಂತೆ ಉತ್ತರ ಕಂಡುಕೊಳ್ಳುವ ಸಾಹಸಕ್ಕೆ ಸುವರ್ಣ ನ್ಯೂಸ್ ಕೈ ಹಾಕಿದೆ.

ಆತ್ಮಗಳು ಮಾತಾಡೋದು ನಿಜಾನಾ..?

ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಖ್ಯಾತ ಸಮ್ಮೋಹಿನಿ ತಜ್ಞ ಬಾಲಕೃಷ್ಣ ಗುರೂಜಿ ಅವರಿಂದ ಆತ್ಮದ ಆವಾಹನೆ ನಡೆಸಿರುವ ಲೈವ್ ಕಾರ್ಯಕ್ರಮ ಇದಾಗಿದೆ. ಆತ್ಮದ ಜತೆ ಸಮ್ಮೋಹಿನಿ ತಜ್ಞ ಹೇಗೆ ಮಾತುಕತೆ ನಡೆಸಿದರು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.