ತಮ್ಮನ ಪೋಟೋಗೆ ಹೂ ಹಾಕಲ್ಲ, ಅಪ್ಪುನ ಕರ್ನಾಟಕದ ರತ್ನ ಮಾಡಿದ್ದು ನೀವುಗಳು: ರಾಘವೇಂದ್ರ ರಾಜ್‌ಕುಮಾರ್

Nov 3, 2022, 5:13 PM IST

ಚಾಮರಾಜ ನಗರದಲ್ಲಿ ಕಲಾಭವನಕ್ಕೆ ಡಾ.ರಾಜ್‌ಕುಮಾರ್ ಹೆಸರಿಡುವ ಉದ್ಘಾಟನೆ ಸಮಾರಂಭಕ್ಕೆ ರಾಘವೇಂದ್ರ ರಾಜ್‌ಕುಮಾರ್‌ರನ್ನು ಆಹ್ವಾನಿಸಿದ್ದರು. ಈ ವೇಳೆ ತಮ್ಮ ಡಾ. ಪುನೀತ್ ರಾಜ್‌ಕುಮಾರ್‌ಗೆ ಬಂದಿರುವ ಕರ್ನಾಟಕದ ರತ್ನ ಪ್ರಶಸ್ತಿ ಬಗ್ಗೆ ಮಾತನಾಡಿದ್ದಾರೆ. ರಾಜರತ್ನನಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿದ್ದು ನೀವುಗಳು ಯಾವುದೂ ನಮ್ಮದಲ್ಲ ಎಲ್ಲ ಪ್ರಶಸ್ತಿ ಅಭಿಮಾನಿ ದೇವರುಗಳದು. ಬರುವಾಗ ನಾವು ಬರಿಗೈಯಲ್ಲಿ ಬಂದಿದ್ದೀವಿ ಹೋಗುವಾಗ ಬರಿಗೈಯಲ್ಲಿ ಹೋಗುತ್ತೀವಿ ಎಲ್ಲವೂ ನೀವು ಕೊಟ್ಟಿರುವುದು. ಗಂಧದ ಗುಡಿ ಸಿನಿಮಾದಲ್ಲಿ ಒಳ್ಳೆಯ ಸಂದೇಶವಿದೆ ವರ್ ಸ್ಟಾರ್ ಕವಚವನ್ನು ಕಳಚಿಟ್ಟು ಗಂಧದ ಗುಡಿ ಸಿನಿಮಾ ಮಾಡಿದ್ದಾರೆ ಎಂದು ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ. 

ಅಪ್ಪುಗೆ ಕರ್ನಾಟಕ ರತ್ನ; ನನ್ನ ಕಣ್ಮುಂದೆ ಬೆಳೆದ ಹುಡುಗ, ಪುನೀತ್ ಬಗ್ಗೆ ಅರುಂಧತಿ ನಾಗ್ ಮಾತು