Puneeth Rajkumar Death: ರಾಜಕೀಯಕ್ಕೂ ಕರೆತರೋಕೆ ನೋಡಿದ್ವಿ, ಅಪ್ಪು ಬಗ್ಗೆ ಡಿಕೆಶಿ ಮಾತು

Oct 29, 2021, 6:29 PM IST

ಇದು ದೊಡ್ಡ ಆಘಾತವಾಗಿರೋ ದಿನ. ಮನುಷ್ಯ ಹುಟ್ಟುಬೇಕಾದ್ರೆ ಉಸಿರಿರುತ್ತದೆ, ಹೆಸರಿರೋದಿಲ್ಲ. ಸಾಯೋವಾಗ ಹೆಸರಿರುತ್ತೆ, ಉಸಿರಿರೋದಿಲ್ಲ ಎಂದು ಕಾಂಗ್ರೆಸ್(Congress) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ಸಾವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿಧಿ ಎಷ್ಟು ಕ್ರೂರಿ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

Puneeth Rajkumar Death: ಸೆಲೆಬ್ರಿಟಿಗಳಿದ್ದರೂ, ಡ್ಯಾನ್ಸರ್ಸ್ ಮಾತನಾಡಿಸುತ್ತಿದ್ದ ಅಣ್ಣಾಬಾಂಡ್

ರಾಜಕೀಯಕ್ಕೂ ಬರಲಿಲ್ಲ. ಕಲಾವಿದರ ಬದುಕು ಉದ್ಯೋಗ ಅಲ್ಲ. ಅದು ಸಮಾಜಿಕವಾದ ಜವಾಬ್ದಾರಿ ಎಂಬುದನ್ನು ರಾಜಕುಮಾರ್ ಕುಟುಂಬ ನಮಗೆ ತೋರಿಸಿಕೊಟ್ಟಿದೆ. ಯಾವುದಕ್ಕೂ ಹೆಚ್ಚು ಆಸೆ ಪಡಲಿಲ್ಲ ಎಂದಿದ್ದಾರೆ. ರಾಜಕೀಯಕ್ಕೆ ಎಳೆಯೋಕೆ ಪ್ರಯತ್ನ ಮಾಡಿದ್ವಿ. ಯಾವುದಕ್ಕೂ ಮನಸು ಆಚೆ ಈಚೆ ಮಾಡಲಿಲ್ಲ. ಈ ಬದುಕು ಯಾರ ಭರವಸೆಯಲ್ಲಿದೆ ಎಂದಿದ್ದಾರೆ ಡಿಕೆಶಿ.