ಆನಂದ್ ಸಿಂಗ್ ಮೇಲೆ ಹಲ್ಲೆಗೆ ಗಣೇಶ್ ಜತೆ ಸಂಚು ಮಾಡಿದ್ದ ಆ ಮೂವರು!

Nov 28, 2019, 8:13 PM IST

ಬೆಂಗಳೂರು(ನ. 28) ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ನಡುವೆ ರೆಸಾರ್ಟ್ ನಲ್ಲಿ ನಡೆದ ಗಲಾಟೆ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈಗ ಅದೇ ವಿಷಯಕ್ಕೆ ಸಂಬಂಧಿಸಿ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ಮಾತನಾಡಿದ್ದಾರೆ.

ಉಪಚುನಾವಣೆ ಸಮಗ್ರ ಸುದ್ದಿ

ಆ ದಿನ ನಾವು, ನಮ್ಮೆಲ್ಲರ ಕಾರ್ಯಕರ್ತರು ಕಾವಲು ಕಾಯದಿದ್ದರೆ ಅಂದು ಆನಂದ್ ಸಿಂಗ್ ಕೊಲೆಯೇ ನಡೆದುಹೋಗುತ್ತಿತ್ತು ಎಂದು ಪ್ರಚಾರ ಭಾಷಣದ ವೇಳೆ ಆತಂಕಕಾರಿ ಸಂಗತಿ ಬಿಚ್ಚಿಟ್ಟಿದ್ದಾರೆ.