ಅರವಿಂದ ಬೆಲ್ಲದ್‌ ಪರ ಮಹಿಳೆಯರ ಪ್ರಚಾರ: ಗೆಲುವಿಗಾಗಿ ಆಂಜನೇಯ ದೇವಾಲಯದಲ್ಲಿ ಪೂಜೆ

Apr 30, 2023, 4:29 PM IST

ಧಾರವಾಡ: ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾಸಕ ಅರವಿಂದ್ ಬೆಲ್ಲದ್‌ ಪರವಾಗಿ ಮಹಿಳಾಭಿಮಾನಿಗಳು ಪ್ರಚಾರ ನಡೆಸಿದ್ದಾರೆ. ವಾರ್ಡ್‌ ನಂಬರ್‌ 33 ರ ಆನಂದನಗರದ ಶ್ರೀ ನೀಲಗಂಗಯ್ಯ ಪೂಜಾರ ವೃತ್ತದಿಂದ ಆರಂಭವಾಗಿ, ಶ್ರೀ ಆಂಜನೇಯ ಸ್ವಾಮಿ ದೇವಾಲಯದ ವರೆಗೆ ಪ್ರಚಾರ ನಡೆಸಿದರು. ಈ ವೇಳೆ ಅರವಿಂದ ಬೆಲ್ಲದ್‌ ಅವರು ಗೆಲ್ಲಬೇಕೆಂದು ಮಹಿಳೆಯರು ದೇವಾಲಯದಲ್ಲಿ ಪೂಜೆ ಪುನಸ್ಕಾರ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಪಾಲಿಕೆ ಸದಸ್ಯ ಸತೀಸ್‌ ಅವರು ಚಾಲನೆ ನೀಡಿದ್ದಾರೆ.