ಅತಂತ್ರ ಪಾಲಿಕೆ; ಜೆಡಿಎಸ್‌ ಮುಂದಿನ ಹೆಜ್ಜೆ ತಿಳಿಸಿದ ಕುಮಾರಸ್ವಾಮಿ

Sep 6, 2021, 6:45 PM IST

ಬೆಂಗಳೂರು(ಸೆ. 06)  ಮಹಾನಗರ ಪಾಲಿಕೆಗೆ ನಡೆದ ಚುನಾವಣೆ ಫಲಿತಾಂಶ ಹೊರಗೆ ಬಂದಿದೆ. ಬೆಳಗಾವಿ ಬಿಜೆಪಿ ಪಾಲಾಗಿದ್ದರೆ ಕಲಬುರಗಿ ಮತ್ತು ಧಾರವಾಡ ಅತಂತ್ರವಾಗಿದೆ.  ಮೂರು ಮಹಾನಗರ ಪಾಲಿಕೆಗಳ ಫಲಿತಾಂಶದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆ ನಡೆಯುತ್ತಿದೆ.

ಬೆಳಗಾವಿಯಲ್ಲಿ ಅಧಿಕಾರಕ್ಕೇರಿ ಬಿಜೆಪಿ ಇತಿಹಾಸ

ಈ ನಡುವೆ ಜೆಡಿಎಸ್ ಮುಂದೆ ಯಾವ ಹೆಜ್ಜೆ ಇಡಲಿದೆ ಎನ್ನುವುದು ಮುಖ್ಯವಾಗಿದೆ. ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಕೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಕಾರ್ಯಕರ್ತರು  ಮತ್ತು ಮುಖಂಡರು ಸೇರಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.