ಸ್ನೇಹಿತ ಲಾಡ್ ಮಾಡುವ ಜೋಕ್ ಬಹಳ ಚೆನ್ನಾಗಿರುತ್ತದೆ!

Dec 3, 2019, 4:22 PM IST

ಬಳ್ಳಾರಿ(ಡಿ. 03)  ರಾಜೀನಾಮೆ ಕೊಟ್ಟ ಮೇಲೆ ನಾನೇ ಯಾವ ಪಕ್ಷಕ್ಕೂ ಹೋಗದ ಸ್ಥಿತಿಯಲ್ಲಿ ಇದ್ದೇನೆ. ಅನಿಲ್ ಲಾಡ್ ಅವರಿಗೆ ಬಿಜೆಪಿಗೆ ಬರುವಂತೆ ನಾನು ಆಹ್ವಾನ ನೀಡಿರಲಿಲ್ಲ. ನಾನು ಸೂರ್ಯನು ಅಲ್ಲ, ಚಂದ್ರನೂ ಅಲ್ಲ ಸಾಮಾನ್ಯ ವ್ಯಕ್ತಿ ಎಂದು ವಿಜಯನಗರ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಹೇಳಿದ್ದಾರೆ.

ಉಪಚುನಾವಣೆ ಅಖಾಡ ಸಮಗ್ರ ಸುದ್ದಿ

ಆನಂದ್ ಸಿಂಗ್ ನನ್ನನ್ನು ಬಿಜೆಪಿ ಆಹ್ವಾನ ನೀಡಿದ್ದರು ಎಂದು ಅನಿಲ್ ಲಾಡ್ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಆನಂದ್ ಸಿಂಗ್ ಅವರು ಚೆನ್ನಾಗಿ ಜೋಕ್ ಮಾಡ್ತಾರೆ ಎಂದರು.