Politics in Neha Murder: ಸಾವಿನ ಮನೆಯತ್ತ ಬರದ ಕಾಂಗ್ರೆಸ್‌..ನೊಂದ ಜೀವಗಳಿಗೆ ಬಿಜೆಪಿ ಸಾಂತ್ವಾನ !

Apr 22, 2024, 5:55 PM IST

ನೇಹಾ ಹಿರೇಮಠ್‌ ಪ್ರಕರಣದಲ್ಲಿ(Neha Hiremath Murder) ರಾಜಕೀಯ ಮಾಡಲಾಗುತ್ತಿದೆ. ಸದ್ಯ ಈ ಪ್ರಕರಣ ಬೂದಿ ಮುಚ್ಚಿದ ಕೆಂಡದಂತಿದೆ. ಹಾಡಹಗಲೇ ನೇಹಾಳನ್ನು(Neha) ಫಯಾಸ್‌ ಎಂಬಾತ ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದಾನೆ. ಪೊಲೀಸರ ವಶದಲ್ಲಿರುವ ಫಯಾಸ್‌ನನ್ನು(Fayas) ತನಿಖೆಗೆ ಒಳಪಡಿಸಲಾಗಿದೆ. ಇನ್ನೊಂದು ಕಡೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ನೇಹಾ ಅಂತ್ಯಕ್ರಿಯೆ ಸಮಯದಲ್ಲಿ ಕಾಂಗ್ರೆಸ್‌ನ(Congress) ಸಚಿವ ಸಂತೋಷ್‌ ಲಾಡ್ ಮಾತ್ರ ಬಂದಿದ್ದರು. ಆದ್ರೆ ಬಿಜೆಪಿ(BJP) ಪಕ್ಷದ ಹಲವು ನಾಯಕರು ನೇಹಾ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲು ಬಂದಿದ್ದರು. ಹುಬ್ಬಳ್ಳಿಯ ಈ ಘಟನೆ ಮೂಲಕ ಲವ್‌ ಜಿಹಾದ್ ಜೀವಂತವಾಗಿದೆ ಎಂಬುದು ಖಾತರಿಯಾದಂತೆ ಆಗುತ್ತಿದೆ.  

ಇದನ್ನೂ ವೀಕ್ಷಿಸಿ:  Watch Video: ರಾಷ್ಟ್ರ ರಾಜಕಾರಣದಲ್ಲಿ ನೇತಾ VS ಅಭಿನೇತಾ ಸಮರ! ರಾಜಕೀಯ ಅಗ್ನಿಪಥಕ್ಕೆ ಬಂದಿದ್ದು ಹೇಗೆ ಬಚ್ಚನ್ ?