ಕಳ್ಳನ ಹೆಂಡತಿ ಯಾವತ್ತಿದ್ದರೂ..ಡ್ಯಾಶ್...: ಸಿ.ಟಿ.ರವಿ ಕೆಂಡಾಮಂಡಲ

Jun 22, 2021, 9:12 PM IST

ಚಿಕ್ಕಮಗಳೂರು, (ಜೂನ್.22): "ಕಳ್ಳನ ಹೆಂಡತಿ ಯಾವತ್ತಿದ್ದರೂ …. ಡ್ಯಾಶ್". ಪಕ್ಷದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ ಬಗೆಯಿದು.

3-4 ಶಾಸಕರಿಂದಷ್ಟೇ ವಿರೋಧ, ಬಿಎಸ್‌ವೈ ಪರ ವರಿಷ್ಠರಿಗೆ ಅರುಣ್‌ ಸಿಂಗ್‌ ವರದಿ!

ಇಂದು (ಮಂಗಳವಾರ) ಚಿಕ್ಕಮಗಳೂರು ತಾಲೂಕಿನ ಖಾಂಡ್ಯದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸುಳ್ಳು ಸುದ್ದಿ ಹಬ್ಬಿಸುವವರು ಯಾರೆಂದು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಸಿಎಂ ಬದಲಾವಣೆ ಎನ್ನುವುದು ಒಂದು ಸುಳ್ಳು ಸುದ್ದಿ. ಉಸ್ತುವಾರಿ ಅರುಣ್ ಸಿಂಗ್ ವರಿಷ್ಠರಿಗೆ ವರದಿ ಕೊಟ್ಟರು ಎನ್ನವುದೂ ಸುಳ್ಳು ಸುದ್ದಿ. ಅರುಣ್ ಸಿಂಗ್ ಮೂರು ದಿನದಿಂದ ಕೇಂದ್ರದಲ್ಲೇ ಇಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಿಡಿಕಾರಿದರು.