Mar 14, 2023, 4:32 PM IST
ಬೆಂಗಳೂರು (ಮಾ.14): ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೊರ ಹೋಗುವುದಿಲ್ಲ ಎಂದು ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ನಾನು ಭಯ ಬಿದ್ದು ಇರೋನಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾನು ಸುಮ್ಮನೆ ಇರಲ್ಲ. ನಾನು ಬಿಜೆಪಿ ಬಿಡಲ್ಲ. ನಾನು ಯಾವ ಕಾರಣಕ್ಕೂ ಬಿಜೆಪಿ ಬಿಡಲ್ಲ. ಬಿಜೆಪಿಯಲ್ಲೇ ಇರ್ತೇನೆ. ಎರಡು ಬಾರಿ ಕಾಂಗ್ರೆಸ್ ನಿಂದ ಶಾಸಕ ಆದೆ, ಬಳಿಕ ಬಿಜೆಪಿ ಬಂದೆ, ಅನಂತ್ ಕುಮಾರ್ ಗೆ ಆಪ್ತ ಇದ್ದೆ. ಅವರು ಬಿಜೆಪಿ ಕರೆದರು. ಎಲ್ಲಾ ಉಪಚುನಾವಣೆಯಲ್ಲಿ ಜವಬ್ದಾರಿ ನೀಡಿದ್ರು. ಗೆಲ್ಲಿಸಿಕೊಂಡು ಬಂದೆ. ಸೋಮಣ್ಣ ಮಠಮಾನ್ಯಗಳಿಗೆ ಕೊಂಡಿ ಆಗಿದ್ದು ಒಬ್ಬನೇ. ನಾನು ಎಲ್ಲಾ ಮಠ ಮಾನ್ಯಗಳಿಗೆ ಕೊಂಡಿ ಆಗಿದ್ದೆ. ನನ್ನ ಸಹಾಯ ಪಡೆದು ಬೆಳೆದವರು ಇಂದು ಏನೇನೋ ಆಗಿದ್ದಾರೆ ಎಂದರು.