ಬೆಳಗಾವಿ ಏನು ಮಹಾರಾಷ್ಟ್ರ ಮಂತ್ರಿಗಳ ಮಾವನ ಮನೆಯೇ?: ಲಕ್ಷ್ಮಣ ಸವದಿ ಕಿಡಿ

Dec 3, 2022, 2:33 PM IST

ಮಹಾರಾಷ್ಟ್ರ ನಾಯಕರಿಗೆ ಬೆಳಗಾವಿಯಲ್ಲಿ ಏನು ಕೆಲಸ ಇದೆ, ಬೆಳಗಾವಿ ಏನೂ ಮಹಾರಾಷ್ಟ್ರ ಮಂತ್ರಿಗಳ ಮಾವನ ಮನೆಯೇ ಎಂದು ಮಹಾರಾಷ್ಟ್ರ ಸಚಿವರಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ಸುಮ್ಮನೆ ಅವರು ಬರುತ್ತೇನೆ ಎಂದು ಹೇಳುತ್ತಾರೆ, ಆದ್ರೆ ಅವರು ಬರಲ್ಲ. ಮಹಾರಾಷ್ಟ್ರ ಸಚಿವರನ್ನು ಬರಲು ನಾವು ಬಿಡಲ್ಲ. ಮಹಾರಾಷ್ಟ್ರ ಹಾಗೂ ಎಂಇಎಸ್‌ ನಾಯಕರಿಗೆ ಬೇರೆ ವಿಷಯವೇ ಇಲ್ಲ. ಎಂಇಎಸ್‌ ಸಂಪೂರ್ಣ ಸತ್ತು ಹೋಗಿದೆ, ಜೀವಂತ ಇಲ್ಲ ಎಂದರು. ಬೆಳಗಾವಿ ನಮ್ಮ ರಾಜ್ಯದ ಅವಿಭಾಜ್ಯ ಅಂಗ. ಅವರು ಹೇಗೇ ಕೇಳುತ್ತಾರೆ?. ಇದು ಅನವಶ್ಯಕವಾಗಿ ಗೊಂದಲ ಹುಟ್ಟಿಸಿ ಸಾಮರಸ್ಯ ಹಾಳು ಮಾಡುವ ಹುನ್ನಾರ‌. ಶಾಸಕರಾಗಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಿ ಶಾಸಕರಾಗಲಿ‌ ಎಂದರು.

Assembly election: ಬಂಡಾಯದ ನೆಲದಲ್ಲಿ ಬಿಸಿಯೇರಿದ ಟಿಕೆಟ್‌ ದಂಗಲ್‌