ವಲಸಿಗ ನಾಯಕನಿಗೆ ಡಿಸಿಎಂ ಭಾಗ್ಯ? ಶ್ರೀರಾಮುಲುಗೆ ಮತ್ತೆ ಆಘಾತ!

Dec 10, 2019, 12:07 PM IST

ಬೆಂಗಳೂರು (ಡಿ.10): ಉಪಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ಬಿಜೆಪಿಗೆ ಈಗ ಮಂತ್ರಿಮಂಡಲದ ಚಿಂತೆ ಕಾಡಲಾರಂಭಿಸಿದೆ.

ವಲಸಿಗರಿಗೆಲ್ಲರಿಗೂ ಸಚಿವ ಸ್ಥಾನ ನೀಡಲಾಗುತ್ತಿದ್ದು, ಸಚಿವಾಕಾಂಕ್ಷಿಗಳಾಗಿರುವ ಮೂಲ ಬಿಜೆಪಿಗರಿಗೆ ಸಂಕಟ ಶುರುವಾಗಿದೆ. ಇನ್ನೊಂದು ಕಡೆ ಡಿಸಿಎಂ ಹುದ್ದೆ ಮತ್ತು ಪ್ರಮುಖ ಖಾತೆಗಳ ಮೇಲೆ ವಲಸಿಗರ ಚಿತ್ತ ನೆಟ್ಟಿದೆ.

ಹಾಗಾಗಿ, ಡಿಸಿಎಂ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿರುವ ಶ್ರೀರಾಮುಲುಗೆ ತೀವ್ರ ಹಿನ್ನಡೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕಾಂಗ್ರೆಸ್‌ನಿಂದ ವಲಸೆ ಬಂದ ಪ್ರಮುಖ ನಾಯಕನಿಗೆ ಡಿಸಿಎಂ ಹುದ್ದೆ ಸಿಗುತ್ತಾ? ಇಲ್ಲಿದೆ ಮತ್ತಷ್ಟು ವಿವರ...