ಸೋಲಿನ ಭೀತಿಯಲ್ಲಿ ಎಂಟಿಬಿ? ಸಿಎಂ ಭೇಟಿ ಮಾಡಿ ಹೇಳಿದ್ದು, ಕೇಳಿದ್ದು....

Dec 7, 2019, 2:42 PM IST

ಬೆಂಗಳೂರು (ಡಿ.07): ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ ಶನಿವಾರ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾದರು. ಚುನಾವಣೆ ಬಳಿಕ ಎಂಟಿಬಿ ಫಲಿತಾಂಶಗಳ ಬಗ್ಗೆ ಆತಂಕ ಹೊಂದಿದ್ದಾರೆಂದು ಹೇಳಲಾಗುತ್ತಿದೆ.

ಈ ಸಂದರ್ಭದಲ್ಲಿ ಕೆಲ ಬಿಜೆಪಿ ನಾಯಕರ ವಿರುದ್ಧ ಯಡಿಯೂರಪ್ಪಗೆ ದೂರನ್ನೂ ನೀಡಿದ್ದಾರೆ,  ಹಾಗೂ  ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ಹೊಸಕೋಟೆ ಸೇರಿದಂತೆ ರಾಜ್ಯದ 15 ಕ್ಷೇತ್ರಗಳಿಗೆ ಕಳೆದ ಡಿ.05ರಂದು ಉಪಚುನಾವಣೆ ನಡೆದಿದೆ. ಡಿ.09 (ಸೋಮವಾರ) ಮತ ಎಣಿಕೆ ನಡೆಯಲಿದ್ದು, ಕಣದಲ್ಲಿರುವ 165 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.